ಕರ್ನಾಟಕ ದ್ರಾಕ್ಷರಸ ಮಂಡಳಿ, ತೋಟಗಾರಿಕೆ ಇಲಾಖೆ ಸಹಭಾಗಿತ್ಬದಲ್ಲಿ ಅಂತರಾಷ್ಟ್ರೀಯ ವೈನ್ ಮೇಳ ಆಯೋಜಿಸಿದೆ ಆರೋಗ್ಯಕರ  ವೈನ್ ಬಳಕೆ ಉತ್ತೇಜಿಸುವ ಹಾಗೂ ಇದಕ್ಕೆ ಪೂರಕ ದ್ರಾಕ್ಷಿ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಡಳಿ ಮೂರು ದಿನಗಳ ಕಾಲ ‘ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ಬೆಂಗಳೂರು-2019’ ಹಮ್ಮಿಕೊಳ್ಳಲಾಗಿದೆ.

ಆಗಸ್ಟ್ 2 ರಿಂದ 4 ರವರೆಗೆ ನಗರದ ‘ಜಯಮಹಲ್ ಅರಮನೆ ಹೊಟೇಲ್ ಪ್ರಾಂಗಣ’ ದಲ್ಲಿ ಉತ್ಸವ ನಡೆಯಲಿದೆ. ಶುಕ್ರವಾರ ಸಂಜೆ 5 ಕ್ಕೆ ಉತ್ಸವಕ್ಕೆ  ಚಾಲನೆ ನೀಡಲಾಗುತ್ತಿದೆ. ಬಿಬಿಎಂಪಿ  ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಬೆಂಗಳೂರು ಕೇಂದ್ರ  ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಬಿಬಿಎಂಪಿ  ಸದಸ್ಯ ಎಂ.ಕೆ.ಗುಣಶೇಖರ್ ಸೇರಿದಂತೆ ಮತ್ತಿತ್ತರರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಹಾಗೂ ರಾಜ್ಯದ ವೈನ್ ತಯಾರಿಕರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಲು, ಆರೋಗ್ಯಕರ ವೈನ್ ಬಳಕೆ ಹೆಚ್ಚಿಸಲು ಅರಿವು ಮೂಡಿಸುವ ಉದ್ದೇಶದಿಂದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ರಾಕ್ಷಾರಸ ಉತ್ಸವದಲ್ಲಿ ರಿಯಾಯಿತಿ ದರದಲ್ಲಿ ವೈನ್ ಮಾರಾಟ, ವೈನ್ ತಯಾರಿಕೆ ಬಗ್ಗೆ ತರಬೇತಿ, ಉತ್ಪಾದಕರು ಹಾಗೂ ಸಾರ್ವಜನಿಕರ ನಡುವಣ ವಿಚಾರವಿ ನಿಯಮ ಕುರಿತು ಮಾಹಿತಿ ಸಿಗಲಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಹಾಗೂ ದೇಶ ವಿದೇಶದ ಹಲವು ನಮೂನೆಯ ವೈನ್‍ಗಳು ಲಭ್ಯವಾಗಲಿವೆ.

LEAVE A REPLY

Please enter your comment!
Please enter your name here