ಬೆಂಗಳೂರು: ಜೂನ್ ೦೨: ರಾಜ್ಯ ಕೃಷಿ ಇಲಾಖೆಗೆ ಹಿರಿಯ ಐಎಎಸ್ ಅಧಿಕಾರಿ ಶರತ್ ಪಿ ಅವರು ನೂತನ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿಂದಿನ ಆಯುಕ್ತ ಬ್ರಿಜೇಶ್ ಕುಮಾರ್ ಅವರ ವರ್ಗಾವಣೆ ನಂತರ ತೆರವಾದ ಸ್ಥಾನಕ್ಕೆ ಈ ನೇಮಕವಾಗಿದೆ, ನೂತನ ಆಯುಕ್ತ ಶರತ್ ಅವರನ್ನು ಕೃಷಿಸಚಿವ ಬಿ.ಸಿ. ಪಾಟೀಲ್ ಅವರು ಹೂಗುಚ್ಛ ನೀಡಿ ಹಾರ್ದಿಕವಾಗಿ ಇಲಾಖೆಗೆ ಬರಮಾಡಿಕೊಂಡು ಶುಭಾಶಯ ಕೋರಿದರು.