ರಾಜ್ಯದಲ್ಲಿ ಕುಸಿದ ತಾಪಮಾನ ; ಯೆಲ್ಲೋ ಅಲರ್ಟ್ ಘೋಷಣೆ

0

ರಾಜ್ಯದ ಹಲವಾರು ಕಡೆಗಳಲ್ಲಿ ಕನಿಷ್ಟ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ದಾಖಲಾಗಿದೆ.  ಅತೀ ಕಡಿಮೆ ಉಷ್ಣಾಂಶ ಬಾಗಲಕೋಟೆಯಲ್ಲಿ 0.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೀದರ್ ನಲ್ಲಿ 8.6,  ಚಾಮರಾಜನಗರದಲ್ಲಿ 9,  ಬಳ್ಳಾರಿ, ಮಂಡ್ಯದಲ್ಲಿ 9.6,  ದಾವಣಗೆರೆಯಲ್ಲಿ 9.8, ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ನಿನ್ನೆ ಬೀದರ್, ವಿಜಯಪುರ, ಬಾಗಲಕೋಟೆಯಲ್ಲಿ ಶೀತಹವೆ ಮುಂದುವರಿದಿತ್ತು.  ಇವತ್ತು ಮತ್ತು ನಾಳೆ ಉತ್ತರ ಒಳನಾಡಿನ ಬೀದರ್, ವಿಜಯಪುರ, ಬಾಗಲಕೋಟೆಯಲ್ಲಿ , ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ ಮತ್ತು ಮಂಡ್ಯ ಇಲ್ಲಿ ಶೀತಹವೆ ಮುನ್ನೆಚ್ಚರಿಕೆ ನೀಡಲಾಗಿದೆ.  ಆದ್ದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೀತಹವೆ ಮುನ್ನೆಚ್ಚರಿಕೆ ನೀಡಲಾಗಿಲ್ಲ.

ಕನಿಷ್ಟ ತಾಪಮಾನದ ಮುನ್ನೆಚ್ಚರಿಕೆ

ಬೀದರ್, ವಿಜಯಪುರ,  ಬಾಗಲಕೋಟೆ ಈ ಜಿಲ್ಲೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಗೆ ಕುಸಿಯುವ ಸಾಧ್ಯತೆ ಇದೆ.  ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ, ಮಂಡ್ಯ, ಮೈಸೂರು,  ಶಿವಮೊಗ್ಗ, ಚಿತ್ರದುರ್ಗ ಈ ಜಿಲ್ಲೆಗಳಲ್ಲಿ  ಉಷ್ಣಾಂಶದ ಪ್ರಮಾಣ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿಯಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಕರಾವಳಿಯ ಕೆಲವು ಕಡೆ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿಯಷ್ಟು ಕಡಿಮೆಯಾಗಬಹುದು.

ನಿನ್ನೆ ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.  ಕನಿಷ್ಟ ತಾಪಮಾನ 14.02 ಡಿಗ್ರಿ ಸೆಲ್ಸಿಯಸ್ದಾಖಲಾಗಿದೆ. ಜನೆವರಿ 1ನೇ ತಾರೀಖಿನಿಂದ ಮಳೆಯಾಗಿಲ್ಲ.  ಹೆಚ್.ಎ.ಎಲ್. ವಿಮಾಣ ನಿಲ್ದಾಣದಲ್ಲಿ ಗರಿಷ್ಠ ುಷ್ಣಾಂಶ 27 ಡಿಗ್ರಿ ಸೆಲ್ಸಿಯಸ್,  ಕನಿಷ್ಟ 14.02 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆ ವರದಿಯಾಗಿಲ್ಲ.  ಕೆಂಪೇಗೌಡ ಅಂತರಾಷ್ಟರೀಯ ವಿಮಾಣ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ 27.7,  ಕನಿಷ್ಟ 13.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇಂದು ಮತ್ತು ನಾಳೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ  ಆಕಾಶ ಸ್ಪಷ್ಟವಾಗಿರುತ್ತದೆ.  ಮುಂಜಾಣೆ ಮಂಜು ಕವಿದ ವಾತಾವರಣವಿರುತ್ತದೆ. ಗರಿಷ್ಟ ತಾಪಮಾನ 29, ಕನಿಷ್ಟ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here