Home Blog Page 123
ಹೈನುಗಾರಿಕೆಯೆಂದರೆ ಯಥೇಚ್ಛವಾಗಿ ಹಿಂಡಿ (ಪಶು ಆಹಾರ) ಖರೀದಿಸಿ ಹಸುಗಳಿಗೆ ನೀಡುವುದಲ್ಲ. ಬದಲು ಯಾವ ರೀತಿಯಲ್ಲಿ ಹಿಂಡಿಯ ಬಳಕೆ ಕಡಿಮೆಗೊಳಿಸಬಹುದು ಎಂಬುದು ಮುಖ್ಯ. ದುಬಾರಿಯಾದ ಹಿಂಡಿ/ದಾಣಿಯನ್ನು ಸಾಧ್ಯವಾದಷ್ಟು ಕಡಿಮೆ ಉಪಯೋಗಿಸಿ ಹೈನುಗಾರಿಕೆ ಕೈಗೊಳ್ಳುವಂತಾದರೆ ಆದಾಯ ಹೆಚ್ಚುತ್ತದೆ. ಬಹುತೇಕ ಹೈನುಗಾರರು ಹಿಂಡಿ ಖರೀದಿಸುವುದರಲ್ಲಿ ತೋರುವ ಉತ್ಸಾಹವನ್ನು ಮೇವು ಬೆಳೆಸಿಕೊಳ್ಳುವುದರಲ್ಲಿ ತೋರಿಸುವುದಿಲ್ಲ. ಉತ್ತಮ ದರ್ಜೆ ಒಣ ಮತ್ತು ಹಸಿರು ಮೇವನ್ನು ನೀಡುವುದರಿಂದ ದುಬಾರಿ ಹಿಂಡಿಯ ಅಗತ್ಯ  ಕಡಿಮೆಯಾಗುತ್ತದೆ. ಹಸಿರು ಮೇವು: ಹೈನುರಾಸುಗಳಿಗೆ ಒಳ್ಳೆಯ ಗುಣಮಟ್ಟದ ಹಸಿರು ಮೇವು ಅಗತ್ಯ. ಇವುಗಳಲ್ಲಿ ರೈತ ತನ್ನ ಕೃಷಿಪದ್ಧತಿ ಮತ್ತು ಅನುಕೂಲ ನೋಡಿಕೊಂಡು...
ಉತ್ತರ ಕರ್ನಾಟಕದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಕುರಿ ತರುಬಿಸುವಿಕೆ ಕ್ರಮ ಇಳಿಮುಖವಾಗುತ್ತಿದೆ. ರೈತರು ರಾಸಾಯನಿಕ ಗೊಬ್ಬರದ ಹಿಂದೆ ಬಿದ್ದಿರುವುದರಿಂದ ಈ ಪದ್ಧತಿ ಮರೆತಂತಿದೆ. ಇನ್ನಿತರೆ ಭಾಗಗಳಲ್ಲಿ ಕುರಿಗೊಬ್ಬರವನ್ನೇ ಬಳಸುತ್ತಾರಾದರೂ ಅದು ಹೆಚ್ಚು ಪರಿಣಾಮಕಾರಿಯಲ್ಲ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಕುರಿ ಸಹಾಯಕ. ತರುಬಿಸುವಿಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. (ತರುಬಿಸುವಿಕೆ ಎಂದರೆ ಕುರಿಯ ಹಿಂಡನ್ನು ಜಮೀನಿನಲ್ಲಿ ಬಿಟ್ಟು ಹಿಕ್ಕೆ ಹಾಗೂ ಮೂತ್ರವನ್ನು ವಿಸರ್ಜಿಸುವಂತೆ ಮಾಡುವುದು) ಹಿಕ್ಕೆ ಪೌಷ್ಟಿಕ ಗೊಬ್ಬರವಾಗಿ, ಮೂತ್ರ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 16 ಬಗೆಯ ಪೋಷಕಾಂಶಗಳಿವೆ. ನೇಪಾಳದ ಕೃಷಿ ಸಂಶೋಧನಾ ಸಂಸ್ಥೆ ನಡೆಸಿದ ಪ್ರಯೋಗದಿಂದ...
ಗ್ರಾಮೀಣ ಭಾಗಕ್ಕೆ ಗೋಬರ್ ಗ್ಯಾಸ್ ಹೊಸದೇನಲ್ಲ. ಆದರಿದು ಮನೆ ಬಳಕೆಗೆ ಮಾತ್ರ ಸೀಮಿತವಾಗಿತ್ತು. ಇದನ್ನು ನೀರೆತ್ತುವ ಪಂಪ್ಸೆಟ್ಗಳಿಗೆ ಬಳಸಿದರೆ ಹೇಗೆ? ಹೌದು, ಈ ರೀತಿಯ ಒಂದು ಪ್ರಯತ್ನ ಕೃಷಿ ವಿವಿಯ ಹಿರಿಯ ಸಂಶೋಧಕೃಷಿ ವಿ. ಕುಮಾರ ಗೌಡ ಮಾಡಿದ್ದಾರೆ. ಹೆಸರು ಜೈವಿಕ ಅನಿಲ ಘಟಕ. ಕರೆಂಟ್ ಕಣ್ಣಾ ಮುಚ್ಚಾಲೆಗೆ ಬೇಸತ್ತ ರೈತರಿಗೆ ಗೋಬರ್ ಗ್ಯಾಸ್ ಕೈ ಹಿಡಿಯಬಹುದು. ಇದರಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಲಭ್ಯ. ಗೋಬರ್ ಗ್ಯಾಸ್ನಲ್ಲಿ ಶೇ. 60ರಷ್ಟು ಮಾತ್ರ ಮೀಥೆಲ್ ಅಂಶ ಇರುತ್ತೆ. ಮಿಕ್ಕಿದ್ದು ಕಾರ್ಬನ್ ಡೈ ಆಕ್ಸೆ„ಡ್. ಇದನ್ನು...
ತರಕಾರಿಗಳ ಕೃಷಿಗೆ ಪ್ರೋತ್ಸಾಹ ಅಗತ್ಯವಿರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಅಗತ್ಯ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಈಗಾಗಲೇ ರಾಜ್ಯದಲ್ಲಿ ಕೃಷಿಭಾಗ್ಯ ಯೋಜನೆ ಜಾರಿಯಲ್ಲಿದೆ. ಇದೇ ಯೋಜನೆಯಡಿ ಈ ಸಹಾಯಧಾನವನ್ನು ನೀಡಲು ನಿರ್ಧರಿಸಿದ್ದು 2018-19 ನೇ ಸಾಲಿನಲ್ಲಿ ''ತರಕಾರಿ ಬೀಜಗಳ ಕಿಟ್ ವಿತರಣೆ'' ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ವ್ಯಾಪ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳು ಒಳಪಡುತ್ತವೆ. 15.00 ಕೋಟಿ ರೂ.ಗಳನ್ನು ವಿನಿಯೋಗಿಸಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿದೆ.  ಪ್ರತಿ ಒಂದು...
ನೀವು ದಟ್ಟಡವಿಗೆ ಹೋಗಿ ಅಲ್ಲಿ ಹೆಜ್ಜೇನು ಗೂಡುಗಳಿರುವ ಮರಗಳಿಂದ ದೂರ ನಿಂತು ನೋಡುತ್ತೀರಿ. ಅಲ್ಲಿ ಕಾಡಿನ ಇತರ ಭಾಗಗಳಂತೆ ಮಂಗಗಳ ಜಿಗಿದಾಟ, ಕುಣಿದಾಟ, ರೆಂಬೆ-ಕೊಂಬೆ ಜಗ್ಗುವುದ್ಯಾವುದೂ ಇರುವುದಿಲ್ಲ. ಕಾಡಾನೆಗಳು ಆ ಮರಗಳಿಗೆ ಮೈ ಉಜ್ಜುವುದಿಲ್ಲ. ತಮ್ಮ ಮರಿಗಳನ್ನು ಆ ಮರಗಳ ಬಳಿ ಬಿಡುವುದೂ ಇಲ್ಲ. ಕಾಡಂದಿಗಳು ಸಹ ಅಂಥ ಮರಗಳ ಬುಡಗಳನ್ನು ಕೋರೆಹಲ್ಲುಗಳಿಂದ ಕೆದಕುವ ಕೆಲಸ ಮಾಡುವುದಿಲ್ಲ. ವಿಧೇಯ ವಿದ್ಯಾರ್ಥಿಗಳಂತೆ ತಲೆಬಗ್ಗಿಸಿ, ಅಲ್ಲಿಂದ ಪಲಾಯನ ಮಾಡುತ್ತವೆ. ಇದಕ್ಕೆ ಕಾರಣ ಜೇನುಹುಳಗಳ ಭಯ. ಕಾಡಂಚಿನಲ್ಲಿ ವ್ಯವಸಾಯ ಮಾಡುತ್ತಿರುವವರು ಬೆಳೆಗಳನ್ನು ಸದಾ ಎಚ್ಚರಿಕೆಯಿಂದ ಕಾವಲು ಕಾಯಬೇಕಾಗುತ್ತದೆ. ಅದರಲ್ಲಿಯೂ...
പഴം, പച്ചക്കറികൾ അങ്ങനെ എന്തുമാകടടെ അവ കൃഷി ചെയ്യുന്ന കർഷകരെ വെള്ളം കുടിപ്പിക്കുന്ന ഒന്നാണ് ധാന്യങ്ങളെ ആക്രമിക്കാനെത്തുന്ന പലതരം ഈച്ചകളും മറ്റനേകം കീടങ്ങളും . ധാന്യങ്ങളുടെ  നല്ല വളർച്ചക്കായി സമയാസമയത്ത് മരുന്നുകൾ അടിച്ചാലും ഇവ ചിലപ്പോ ഒഴിഞ്ഞ് പോകാറില്ല. ഉയർന്ന വിലയും   പല തരം കാടനാശിനികൾ വാങ്ങാൻ കർഷകരെ പിന്നോട്ട് വലിക്കുന്ന ഒന്നാണ്, പരസ്യങ്ങളിലും  കടകളിലും  ഉയർന്ന വിലക്ക് ലഭിയ്ക്കുന്ന നല്ലയിനം  കീടനാശിനികൾക്ക് ബദലായി കുറഞ്ഞ വിലയിൽ കീടങ്ങളെ തുരത്താൻ ഇപ്പോൾ വിപണിയിൽ പുതിയതരം കെണി എത്തിക്കഴിഞ്ഞു. ഉയർന്ന അളവിൽ രാസവസ്തുക്കളടങ്ങിയിരിയ്ക്കുന്ന കീടനാശിനികളുടെ ഉപയോഗം...
ಲೇಖನದ ಶೀರ್ಷಿಕೆ ಓದಿ ಈ ರೀತಿಯ ಹಾಳೆಗಳು ಇರಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತದೆ. ರಾಸಾಯನಿಕ ಕೀಟನಾಶಕ ತರಲು ಹಣ ಸುರಿಯದೇ, ಯಾವುದೇ ಥರದ ಕೀಟನಾಶಕ ಸಿಂಪಡಿಸದೇ ಹಾನಿಕಾರಕ ಕೀಟಗಳನ್ನು ನಿಯಂತ್ರಿಸುವ ಇಂಥ ಹಾಳೆಗಳಿಗೆ  ಮ್ಯಾಜಿಕ್ ಸ್ಟಿಕ್ಕರ್ಸ್ ಎಂದು ಸಹ ಕರೆಯುತ್ತಾರೆ. ಇವುಗಳಲ್ಲಿ ನೀಲಿ ಮತ್ತು ಹಳದಿ ಹಾಳೆಗಳಿವೆ. ಮೊದಲಿಗೆ ಹಳದಿ ಹಾಳೆಯ ವಿಶೇಷತೆಗಳನ್ನು ಗಮನಿಸೋಣ. ವಿಶೇಷ ಹಳದಿ ಅಂಟು ಬಲೆಗಳು ಹಾರುವ ಕೀಟಗಳ ಕಣ್ಣುಗಳಿಗೆ ಚಿಗುರುವ ಎಲೆಗೊಂಚಲಿನಂತೆ ಕಾಣುತ್ತವೆ. ಇದರಿಂದ ಆಕರ್ಷಿತವಾಗಿ ಬರುವ ಕೀಟಗಳು ಹಾಳೆಯ ಮೇಲೆ ಕುಳಿತೊಡನೆ ಅಲ್ಲಿರುವ...
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಡಿಕೆ ಹಾಳೆಯನ್ನು ಅವಲಕ್ಕಿ ರೂಪಕ್ಕೆ ತರುವ ಘಟಕ ಸ್ಥಾಪಿತವಾಗಿದೆ. ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ, ಪುತ್ತೂರಿನ ಕರ್ನಾಟಕ ಹಾಲು ಮಹಾ ಮಂಡಳಿ ಘಟಕ ಮತ್ತು ಪಾಣಾಜೆ ಹಾಲು ಉತ್ಪಾದಕರ ಸಂಘದ ಸಂಯುಕ್ತ ಶ್ರಮ-ಆಸಕ್ತಿಯಿಂದ ಈ ಘಟಕ ಆರಂಭವಾಗಿದೆ. ಯಂತ್ರಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿಯೇ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲಾಗಿದೆ. ಯಂತ್ರೋಪಕರಣಗಳನ್ನು ಖರೀದಿಸಲು ನಾಲ್ಕು ಲಕ್ಷ ವೆಚ್ಚವಾಗಿದೆ. ಇದಕ್ಕೆ ನಬಾರ್ಡ್ ಕೂಡ ಆರ್ಥಿಕ ಸಹಾಯ ನೀಡಿದೆ. ಕಟ್ಟಡ...
ತೋಟಗಾರಿಕೆ: ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್. ರಾಮನಗರ , ಧಾರವಾಡ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ.  ಅನುದಾನ. ಕೃಷಿ : ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ ಒಟ್ಟಾರೆ ರೂ. 472 ಕೋಟಿ ಅನುದಾನ. ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ...
ಇತ್ತೀಚೆಗೆ ಸುತ್ತೂರು ಜಾತ್ರೆಯ ಅಂಗವಾಗಿ ನಡೆದ ಕೃಷಿ ಗೋಷ್ಠಿಯಲ್ಲಿ ನನ್ನ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದವರ ಪೈಕಿ ನನಗೆ ಹೆಚ್ಚು ಇಷ್ಟವಾದವರು ಆನೇಕಲ್ ತಾಲ್ಲೂಕಿನ ಕಂಬಳೀಪುರದ ಸಾವಯವ ರೈತ ಕಾಂತರಾಜು. ಇವರ ಬಗ್ಗೆ ಅಲ್ಲಲ್ಲಿ ಕೇಳಿದ್ದ ನಾನು ಕಳೆದ ಸಲ ಬೆಂಗಳೂರಿನಲ್ಲಿ ನಡೆದ ಕೃಷಿಮೇಳಕ್ಕೆ ಹೋಗಿದ್ದಾಗ ಭೇಟಿಮಾಡಲು ಪ್ರಯತ್ನಿಸಿದ್ದೆ, ಕರೆ ಮಾಡಿದಾಗ ಅವರು ತೋಟದಲ್ಲಿ ಇರಲಿಲ್ಲ. ಅನ್ಯ ಕೆಲಸ ನಿಮಿತ್ತ ಆಚೆ ಹೋಗಿದ್ದರು. ಅರಸುವ ಬಳ್ಳಿ ಕಾಲಸುತ್ತಿಕೊಂಡಂತೆ ಇಬ್ಬರೂ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದೇವು .ಇದನ್ನೇ ಅಸ್ತಿತ್ವದ ಆಟ, ನಾವು ತೀವ್ರವಾಗಿ ಬಯಸಿದ್ದು ಆಗಿಯೇ ಆಗುತ್ತದೆ...

Recent Posts