Home Blog
ವಿಶ್ವ ಭೂ ದಿನ- 2024 ವಿಶೇಷ ದನಕುರಿಗೆ ನಾವು ಕಾಡು ಹಾದಿಯ ಹಿಡಿದು ಬಯಲುಗುಂಟ ಹೋಗುವಾಗ ಜೊತೆಗೆ ಕುಡಿಯುವ ನೀರು ಕೊಂಡೊಯ್ಯುವ ಒತ್ತಡ ಇರುತ್ತಿರಲಿಲ್ಲ, ಎಕೆಂದರೆ ನಮಗೆ ಮೊದಲೇ ಪರಿಚಯವಿರುತ್ತಿತ್ತು ಬಾಯಾರಿದರೆ ನೀರಿಗೆ ಹೋಗಲು ನೀರಿನ ಉಳಿಮೆ ನೈಸರ್ಗಿಕ ಸಾಗುವಳಿಯ ಜಾಗಗಳು. ಕೆರೆ, ಕಟ್ಟೆ ಅವುಗಳ ಹಳ್ಳಗಳು ಸ್ವಾಭಾವಿಕವಾಗಿಯೇ ನೀರಿನ ಹಿಡುವಳಿಗಳಾಗಿರುತಿದ್ದವು. ಭೂಮಿಯ ಮೇಲೆ ನಡೆಯುತ್ತಿರುವ ಮಾನವನ  ದಬ್ಬಾಳಿಕೆ ಕಂಡರೆ ಹಾಳಾಗುತ್ತಿರುವ ಹಿಂದಿನ ಭೂರಚನೆಯ ನೆನೆದು ಹೆದರಿಕೆಯಾಗುವುದು. ಆಹಾರ ಬೆಳೆಗಳನ್ನು ಬೆಳೆಯುವ ಹೊಲಗಳಲ್ಲಿ ತೋಟಗಾರಿಕೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬದುಕಿನ ಬಾಲಯಿಡಿದು ಭೂ ರಚನೆಯನ್ನೇ ಬುಡಮೇಲು...
ಗುರುವಾರ, 18ನೇ ಏಪ್ರಿಲ್ 2024/29ನೇ ಚೈತ್ರ, 1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:   ಒಳನಾಡಿನ  ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.  ಕರಾವಳಿಯಲ್ಲಿ ಒಣ ಹವೆ ಇತ್ತು. ಮುಖ್ಯ ಮಳೆಯ ಪ್ರಮಾಣಗಳು (ಸೆಂ.ಮೀ ನಲ್ಲಿ): ಭಾಲ್ಕಿ (ಬೀದರ್ ಜಿಲ್ಲೆ) 1. ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 41.4 ಡಿ.ಸೆ ಕಲಬುರ್ಗಿಯಲ್ಲಿ ದಾಖಲಾಗಿದೆ. ಕರ್ನಾಟಕ ರಾಜ್ಯಕ್ಕೆ ಮಳೆಯ ಮುನ್ಸೂಚನೆ: 18ನೇ ಏಪ್ರಿಲ್ 2024:  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು,...
ದಿನಾಂಕ: ಬುಧವಾರ, ಏಪ್ರಿಲ್ 3, 2024 (14 ಚೈತ್ರ 1946) ವಿತರಣೆಯ ಸಮಯ: ಭಾರತೀಯ ಕಾಲಮಾನ ಅಪರಾಹ್ನ 12 ಗಂಟೆ.  ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ. ಸಿನೊಪ್ಟಿಕ್ ಹವಾಮಾನ ಲಕ್ಷಣ: ದಕ್ಷಿಣ ತಮಿಳುನಾಡಿನಿಂದ ಪೂರ್ವ ವಿದರ್ಭದವರೆಗೆ ಆಂತರಿಕ ಕರ್ನಾಟಕ ಮತ್ತು ಮರಾಠವಾಡದ ಮೂಲಕ 0.9 ಕಿಮೀ ಎತ್ತರದಲ್ಲಿ ಸಮುದ್ರ ಮಟ್ಟದಿಂದ ತೊಟ್ಟಿ/ಗಾಳಿ ಸ್ಥಗಿತಗೊಳ್ಳುತ್ತದೆ. ಮುಂದಿನ ಏಳು ದಿನಗಳ ಕಾಲ ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆಗಳು ದಿನ 1 (03.04.2024): ಮಂಡ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ...
ತೃಣ ಧಾನ್ಯಗಳು ಮಾನವರ ಆಹಾರದಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತವೆ. ಅತಿ ಕಡಿಮೆ ಮಳೆ ಬಿಳುವ ಪ್ರದೇಶದಲ್ಲಿ ಸುಲಭವಾಗಿ ಬೆಳೆಯಬಹುದಾದ ಸಾಮೆ, ರೋಗಮುಕ್ತವಾಗಿರುತ್ತದೆೆ. ಆದ್ದರಿಂದ ಇದನ್ನು ಬರಗಾಲದ ಬೆಳೆಯೆಂದೆ ಕರೆಯಬಹುದು. ಸಾಮೆ (ಪ್ಯಾನಿಕಮ್ ಸೂಮಾಟ್ರೆನ್ಸ್) ಪೋಯೇಸಿಯಿ ಕುಟುಂಬದಲ್ಲಿನ ಕಿರುಧಾನ್ಯದ ಒಂದು ಪ್ರಜಾತಿ. ಬರಗು ಧಾನ್ಯಕ್ಕಿಂತಲೂ ಚಿಕ್ಕದೆನ್ನುವುದನ್ನು ಬಿಟ್ಟರೆ ತೃಣಧಾನ್ಯದ ಈ ಪ್ರಜಾತಿ ಪ್ರವೃತಿಯಲ್ಲಿ ಅದನ್ನೇ ಹೋಲುತ್ತದೆ. ಇದು ಎತ್ತರದಲ್ಲಿ ೩೦ ಸೆ.ಮಿ. ಇಂದ ೧ ಮಿ. ವರೆಗೆ ನೇರವಾಗಿ ಅಥವಾ ಮಡಚಿದ ದಳಗಳೊಂದಿಗೆ ಬೆಳೆಯುವ ಒಂದು ವರ‍್ಷಿಕ ಮೂಲಿಕೆಯಂಥ ಸಸ್ಯ. ಸಾಮೆಯನ್ನು ಅಕ್ಕಿಯಂತೆ ಬೇಯಿಸಲಾಗುತ್ತದೆ. ತರಹೇವಾರಿ ತೃಣ...
ಶಾಖದ ಅಲೆಯ ಸಮಯದಲ್ಲಿ ಏನು  ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿದಿರುವುದು ಅವಶ್ಯಕ. ಶಾಖದ ಅಲೆಯ ಸಮಯದಲ್ಲಿ ಪರಿಸ್ಥಿತಿಗಳು ಶಾರೀರಿಕ ಒತ್ತಡಕ್ಕೆ ಕಾರಣವಾಗಬಹುದು. ಇದು ಸಾವಿಗೆ ಕಾರಣವಾಗಬಹುದು. ಶಾಖದ ಅಲೆಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಶಾಖದ ಹೊಡೆತದಿಂದ ಗಂಭೀರ ಕಾಯಿಲೆ ಅಥವಾ ಸಾವನ್ನು ತಡೆಗಟ್ಟಲು, ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು: ದೈನಂದಿನ ಕೆಲಸ-ಕಾರ್ಯದ ಸಲುವಾಗಿ ಹೊರಗೆ ಓಡಾಡುವವರಿಗೆ:  ವಿಶೇಷವಾಗಿ ಮಧ್ಯಾಹ್ನ 12.00 ರಿಂದ 3.00 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ. ಸಾಧ್ಯವಾದಷ್ಟು ಹಗುರವಾದ,...
ಮಂಗಳವಾರ, 26ನೇ ಮಾರ್ಚ್ 2024/06ನೇ ಚೈತ್ರ, 1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ರಾಜ್ಯದಾದ್ಯಂತ ಒಣ ಹವೆ ಇತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಗರಿಷ್ಠ ಉಷ್ಣಾಂಶ 39.9 ಡಿ.ಸೆ ಬಾಗಲಕೋಟೆಯಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 18.0 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ. 28ನೇ ಮಾರ್ಚ್ 2024 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ...
ರೈತರ ಕೃಷಿ ಜಮೀನುಗಳು ತಮ್ಮ ಫಲವತ್ತತೆಯನ್ನು ಹಲವಾರು ಕಾರಣಗಳಿಗಾಗಿ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಕೃಷಿಯ ಚಟುವಟಿಕೆಗಳು ಹೇಗಿದ್ದವು ಎನ್ನುವುದರ ಕುರಿತು ಪರಿಶೀಲಿಸಿದಾಗ ಗಮನಾರ್ಹ ಸಂಗತಿಗಳು ತಿಳಿಯುತ್ತವೆ.  ಸಾಮಾನ್ಯವಾಗಿ ಎಲ್ಲ ಕಡೆಯಲ್ಲಿ ಯುಗಾದಿಯ ಹಿಂದೆ ಮುಂದೆ ಮಳೆಗಾಲದಲ್ಲಿ ಕೃಷಿ ಭೂಮಿಯ ಮೇಲೆ ಬಿದ್ದು ಹರಿದು ಹೋದ ಮಳೆನೀರು ಫಲವತ್ತಾದ ಮಣ್ಣನ್ನು ಕೆರೆಗೆ ಒಯ್ದಿರುತ್ತದೆ, ಬರೀ ಮಣ್ಣನ್ನು ಮಾತ್ರವಲ್ಲದೇ ಎಲೆ- ಸೊಪ್ಪು ಮುಂತಾದ ಪೋಷಕಾಂಶಗಳನ್ನೂ ಒಯ್ದು ಹಾಕಿರುತ್ತದೆ. ಹಾಗಾಗಿ ಎತ್ತಿನ ಬಂಡಿಗಳಲ್ಲಿ ಫಲವತ್ತಾದ ಕೆರೆ ಹೂಳನ್ನು ತಂದು ವಾಪಾಸ್‌ ಜಮೀನಿಗೆ ಹಾಕಿಕೊಳ್ಳುತ್ತಿದ್ದರು. ಇದರಿಂದಾಗಿ ಕೃಷಿಭೂಮಿಗೆ...
ಇತ್ತೀಚೆಗೆ ರಾಜಶೇಖರ್ ಎನ್ನುವವರು ನಾನು ರಚಿಸಿರುವ “ಬೆಳಕಿನ ಬೇಸಾಯ” ಪುಸ್ತಕ ಎಲ್ಲಿ  ಸಿಗುತ್ತದೆ ಎಂದು ವಿಚಾರಿಸಲು ಪೋನ್ ಮಾಡಿದ್ದರು. ಇದರ ಮಾಹಿತಿಯನ್ನು ನೀಡಿದೆ.  ನಂತರ ಅವರು ತಮ್ಮ ಮಾತುಗಳನ್ನು ಮುಂದುವರಿಸಿದರು.  “ಸರ್‌,  ನಮ್ಮ ಏಳು ವರ್ಷದ ಮಗುವಿಗೆ ಎ ಪ್ಲಾಸ್ಟಿಕ್ ಅನೀಮಿಯಾ ಕಾಯಿಲೆ ಬಂದಿದೆ. ಆಸ್ಪತ್ರೆಯಲ್ಲಿ ಇದೇವೆ. ಇದು ಗುಣವಾಗಲು ಬೋನ್ ಮಾರೋ ಚಿಕಿತ್ಸೆಗಾಗಿ ಸುಮಾರು 25 ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ.  ದಾನಿಗಳ ಹತ್ತಿರ ದುಡ್ಡನ್ನು ಹೊಂದಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ” ಎಂದು ತಮ್ಮ ದುಃಖ ತೋಡಿಕೊಂಡರು. ಈ ಕಾಯಿಲೆಗೆ ಏನು ಕಾರಣ...
ದೂರದಿಂದ ನೋಡಿದಾಗ ಕಲ್ಲುಬಂಡೆಯ ಮೇಲೆ ಅರಳಿರುವ "ಪಾಚಿ" ಯಂತೆ ಕಂಡುಬರುವ ಈ ಸಸ್ಯದ ಹೆಸರು ಲ್ಲಾರೆಟಾ( Llareta) ಎಂದು .ಇದರ ವೈಜ್ಞಾನಿಕ ಹೆಸರು "ಅಜೆರೊಲಾ ಕಾಂಪ್ಯಾಕ್ಟಾ" ( Azorella compacta ) ಈ ಸಸ್ಯ ಜಗತ್ತಿನ ಅತ್ಯಂತ ಹಳೆಯ ಸಸ್ಯ ಎನ್ನುತ್ತಾರೆ. ಹೆಚ್ಚಾಗಿ ಮರಳು ಮಿಶ್ರಿತ ಅರೆ ಮರುಭೂಮಿಯಲ್ಲಿ ಬೆಳೆಯುವ ಈ ಸಸ್ಯ ವರ್ಷಕ್ಕೆ ಕೇವಲ ಒಂದು ಮಿಲಿ ಮೀಟರ್ ವರೆಗೆ ಮಾತ್ರ ಬೆಳೆಯುತ್ತದೆ. ಇವುಗಳ ಸರಾಸರಿ ಆಯುಸ್ಸು ಮೂರು ಸಾವಿರ ವರ್ಷಗಳು.  ಇದೊಂದು "ಹರ್ಮೋಪ್ರೋಡೈಟ್" (hermaphrodite).ಅಂದರೇ ಗಂಡು ಮತ್ತು ಹೆಣ್ಣಿನ ಸಂತಾನೋತ್ಪತ್ತಿಯ...
ಅಡುಗೆಮನೆಯಲ್ಲಿ ಸಾಮಾನ್ಯವಾಗಿ  ಎಂದಿಗೂ  ಆಹ್ವಾನಿಸದ ಅತಿಥಿಗಳನ್ನು ಕಾಣುತ್ತೇವೆ. ನಾವು ಏನೇ ಸಿದ್ಧಪಡಿಸಿದರೂ ಅವುಗಳು  ಕೇಳುವುದು ವಾಡಿಕೆ. ಅವುಗಳನ್ನು ತಡೆಯಲು ಅಸಹಾಯಕರಾದ ನಾವು ಅವುಗಳ ಅಡಗುದಾಣಗಳನ್ನು ಹುಡುಕಲು ಹುಡುಕಿದೆವು, ಆದರೆ  ಆ ಪ್ರಯತ್ನ ವ್ಯರ್ಥವಾಯಿತು. ಅವುಗಳ ರಹಸ್ಯ ಸ್ಥಳವು ನಮಗೆ ಇನ್ನೂ ನಿಗೂಢವಾಗಿದೆ. ಆದರೆ ಅವುಗಳ  ಮೆಚ್ಚಿನ ತಿನಿಸುಗಳ ಸಮಯದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಸೇರುತ್ತವೆ. ಹಾಲು, ಮೊಸರು ಮತ್ತು ಬೆಣ್ಣೆಯ ಹಾಲಿನ ಮೇಲೆ ತೇಲುವ ಅವುಗಳ ಶರೀರವು  ಸಹ ನಾವು ಅವುಗಳನ್ನು ಕೊಂದಿದ್ದೇವೆ ಎಂಬ ತಪ್ಪಿತಸ್ಥ ಭಾವನೆಯನ್ನು ಉಂಟುಮಾಡಿದ ಕಾರಣ, ನಾವು ಅರಿವಿಲ್ಲದೆಯೇ ನಮ್ಮ ಆಹಾರ...

Recent Posts