‘ನನ್ನ ಯಶಸ್ಸಿನ ತಳಹದಿಯೇ ಸಮಗ್ರ ಕೃಷಿ. ಇದೇ ಸಾಧನೆಯ ಮಂತ್ರ ಮತ್ತು ಜೀವಾಳ’ ಹೀಗೆನ್ನುತ್ತಾರೆ ಇಡೀ ಕೃಷಿರಂಗವೇ ತಮ್ಮತ್ತ ಅಚ್ಚರಿಯಿಂದ ನೋಡುವಂತೆ ಮಾಡಿದ ರೈತ ಸದಾನಂದ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದ ತಪಸೀಹಳ್ಳಿ ಗ್ರಾಮ ನಿವಾಸಿ. ವ್ಯವಸಾಯ ಎಂದರೆ ನಷ್ಟದಾಯಕ ಬಾಬತ್ತು ಎನ್ನುವ ಭಾವನೆ ದಟ್ಟವಾಗಿದೆ. ಇಂಥ ಸಂದರ್ಭದಲ್ಲಿ ಐವತ್ತರ ವಯೋಮಾನದ ಅತಿ ಸಣ್ಣ ರೈತ ಸದಾನಂದ ಅವರು ಕೃಷಿಯಲ್ಲಿ ಮಾಡಿದ ಸಾಧನೆ ಮತ್ತು ಇದೇ ಹಾದಿಯಲ್ಲಿ ಮುಂದುವರಿಲು ರೂಪಿಸಿಕೊಂಡಿರುವ ಯೋಜನೆಗಳು ಬಲು ಅಪರೂಪದ ವಿದ್ಯಮಾನ...
ಹೆಚ್. ಸದಾನಂದ ಅವರದು ಕೃಷಿಕ ಕುಟುಂಬದ...
ಉತ್ತಮ ಪ್ರಚಾರ ನೀಡಿ ತರಕಾರಿ-ಫಲ ಪ್ರದರ್ಶನ ಮಾಡಿದರೆ ಬೆಂಗಳೂರಿಗರು ಸ್ಪಂದಿಸುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆ; ಬೆಂಗಳೂರಿನ ಲಾಲ್ಬಾಗಿನಲ್ಲಿ ನವೆಂಬರ್ನಲ್ಲಿ ಐದು ದಿನ ಫಲ ಪ್ರದರ್ಶನ-ಮಾರಾಟ ಏರ್ಪಾಡು. ಈಶಾನ್ಯ ರಾಜ್ಯಗಳವರಿಗಾಗಿಯೇ ಈ ವಿಶೇಷ ವ್ಯವಸ್ಥೆ. ಈಶಾನ್ಯ ರಾಜ್ಯಗಳ ಕೃಷಿ-ತೋಟಗಾರಿಕೆ ಇಲಾಖೆಗಳವರು ರೈತರೊಂದಿಗೆ ಬಂದು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಳಿಗೆ ತೆರೆದಾಗ ಸ್ಪಂದನೆ ದೊರೆಯುತ್ತದೋ ಇಲ್ಲವೂ ಎಂಬ ಆತಂಕ ಹೆಚ್ಚಿನವರಲ್ಲಿತ್ತು. ಸಂಜೆ ಇವರ ಆಕಂಕ ಮರೆಯಾಗಿ ಉತ್ಸಾಹ-ಉಲ್ಲಾಸ ಮನೆಮಾಡಿತ್ತು. ತಂದ ಸರಕು ಕೂಡ ಸಾಲುವುದಿಲ್ಲ ಎಂಬ ವಿಶ್ವಾಸ ಮೊದಲದಿನವೇ ಮೂಡಿತ್ತು.
ಮಿಜೋರಾಂ, ಮಣಿಪಾಲ್, ನಾಗಾಲ್ಯಾಂಡ್ ರೈತರಲ್ಲದೇ ಮಹಾರಾಷ್ಟ್ರದ ರೈತರೂ...
ರಾಜ್ಯದ ಬಹುತೇಕ ಗ್ರಾಮೀಣರ ಜೀವನಾಧಾರ ಹೈನುಗಾರಿಕೆ. ಇದನ್ನು ಕ್ರಮಬದ್ಧ ಮತ್ತು ವೈಜ್ಞಾನಿಕ ಮಾದರಿಯಲ್ಲಿ ಮಾಡಬೇಕು. ಇಲ್ಲದಿದ್ದರೆ ನಷ್ಟಗಳ ಸರಮಾಲೆಯೇ ಉಂಟಾಗುತ್ತದೆ. ಆದ್ದರಿಂದ ಹೈನುಗಾರಿಕೆಯನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಾಡುವುದು ಹೇಗೆ ಎಂದು ತಿಳಸುವ ಆ್ಯಪ್ ಅಗತ್ಯ. ಇತ್ತೀಚೆಗೆ ಇಂಥ ಆ್ಯಪ್ ಬಿಡುಗಡೆಯಾಗಿದೆ.
ರಾಜ್ಯದಲ್ಲಿ ಹೈನುಗಾರಿಕೆ ಕ್ರಾಂತಿಯೇ ಉಂಟಾಗಿದೆ. ಇದಕ್ಕೆ ಕಾರಣ ತಜ್ಞರ ಮಾರ್ಗದರ್ಶನ ಮತ್ತು ಗ್ರಾಮೀಣರ ಆಸಕ್ತಿ. ಬಹುತೇಕ ಗ್ರಾಮೀಣರಿಗೆ ಇದು ಜೀವನಾಧಾರ. ಅವರ ದೈನಂದಿನ ಜೀವನಾವಶ್ಯಕತೆಗೆ ಅವಶ್ಯಕವಾದ ಹಣ ಇದರಿಂದಲೇ ದೊರೆಯುತ್ತದೆ. ಒಂದು ವೇಳೆ ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಚಿತವಾಗಿ ತಿಳಿಯದಿದದ್ದರೆ...
"ಕೇಂದ್ರಸರ್ಕಾರ ಅಪಾರ ಖರ್ಚುಮಾಡಿ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದೆ. ಇದರೊಂದಿಗೆ ಎಳನೀರು ನೀಡಿದರೆ ತೆಂಗು ವಲಯ ಊಹೆಗೂ ಮೀರಿದ ನಿಟ್ಟಿನಲ್ಲಿ ಚೇತರಿಸಿಕೊಳ್ಳುತ್ತದೆ. ಎಳನೀರು ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ಅದರ ಪ್ರಯೋಜನ ಮಕ್ಕಳಿಗೆ ದೊರೆಯುತ್ತದೆ" ಹೀಗೊಂದು ಬೇಡಿಕೆಯನ್ನು ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ವಿ. ಆನಂದ್ ಬೋಸ್ ಅವರು ಕೇಂದ್ರಸರ್ಕಾರದ ಮುಂದಿಟ್ಟಿದ್ದಾರೆ.
ಕೃತಕ ತಂಪುಪಾನೀಯಗಳ ಭರಾಟೆಯಲ್ಲಿ ನೈಸಗರ್ಿಕ ತಂಪುಪಾನೀಯ ಎಳನೀರು ಮಂಕಾಗಿದೆ. ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಭರಾಟೆ ಹೇಗಿದೆಯೆಂದರೆ ಶಾಲಾ ಮಕ್ಕಳಿರಲಿ ಐದು ವರ್ಷದ ಮಕ್ಕಳು ಕೂಡಾ ಕೃತಕ ತಂಪುಪಾನೀಯವೇ ಬೇಕೆಂದು ಹಠ ಹಿಡಿಯುವಷ್ಟು....
"ಉತ್ತಮ ಇಳುವರಿ ಪಡೆಯಲು ಕೃಷಿಕರು ಶ್ರಮ ಪಡುತ್ತಾರೆ. ಇಂಥ ಸಂದರ್ಭದಲ್ಲಿ ಬಳಸಬೇಕಾದ ಪೋಷಕಾಂಶ, ಬೆಳೆವರ್ಧಕಗಳ ಮಾಹಿತಿ ಅಗತ್ಯವಾಗಿರುತ್ತದೆ. ಸಸ್ಯರೋಗಗಳು, ಕೀಟಬಾಧೆ ಕಂಡು ಬಂದ ಸಂದರ್ಭದಲ್ಲಿಯೂ ಶೀಘ್ರ ಪರಿಹಾರಕ್ಕಾಗಿ ಅವರಿಗೆ ವೈಜ್ಞಾನಿಕ ನೆಲೆಗಟ್ಟಿನ ಸಲಹೆ ಸೂಚನೆಗಳು ಬೇಕಿರುತ್ತವೆ. ಈ ನಿಟ್ಟಿನಲ್ಲಿ ತತಕ್ಷಣ ಅವರಿಗೆ ಪರಿಹಾರ ಸೂಚಿಸುವ ಸಲುವಾಗಿ 'ಕ್ರಿಯಾಜೆನ್ ಅಗ್ರಿ ಅ್ಯಪ್' ಅಭಿವೃದ್ಧಿ ಪಡಿಸಲಾಗಿದೆ" ಎಂದು ಕೃಷಿ ವಿಜ್ಞಾನಿ ಮತ್ತು ಕ್ರಿಯಾಜೆನ್ ಸಂಸ್ಥೆ ಮುಖ್ಯಸ್ಥರೂ ಆದ ಡಾ.ಬಸವರಾಜ ಗಿರೆಣ್ಣವರ್ ವಿವರಿಸಿದರು.
ಕರ್ನಾಟಕದ ಕೃಷಿರಂಗಕ್ಕೆ 'ಕೃಷಿ ಅ್ಯಪ್' ಹೊಸ ಪರಿಕಲ್ಪನೆ. ಇದನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕ್ರಿಯಾಜೆನ್...
ಕೃಷಿಯ ಜೊತೆಜೊತೆಗೆ ಪೂರಕ ಉಪಕುಸುಬುಗಳು ಇರಬೇಕು. ಆಗಷ್ಟೆ ಸುಸ್ಥಿರ ಮಾದರಿ ಕೃಷಿಬದುಕು ನಡೆಸಲು ಸಾಧ್ಯವಾಗುತ್ತದೆ. ಕೃಷಿಯೊಂದನ್ನೇ ನೆಚ್ಚಿಕೊಂಡು ಬದುಕುವುದು ಕಷ್ಟಕರ. ಅದರಲ್ಲಿಯೂ ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿಯೊಂದನ್ನೇ ನಂಬಿ ಬದುಕುವುದು ಸವಾಲಿನ ಸಂಗತಿ. ಆದ್ದರಿಂದ ಕೊಂಚ ಪರಿಣತಿ ಇರುವ, ಆಸಕ್ತಿ ಇರುವ ಉಪಕುಸುಬುಗಳನ್ನು ಸಹ ಮಾಡುವುದು ಅತ್ಯಗತ್ಯ. ಕ್ರಮೇಣ ಇಂಥ ಉಪ ಕಸುಬು ಪ್ರಧಾನ ವೃತ್ತಿಯೇ ಆಗಿ ಪರಿಣಮಿಸಬಹುದು.
ಕರ್ನಾಟಕ ರಾಜ್ಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೃಷಿಕರ ಸಂಖ್ಯೆಯೇ ಹೆಚ್ಚು. ಚಿಕ್ಕಚಿಕ್ಕ ಹಿಡುವಳಿಗಳ ಕಾರಣ ಇವರು ಕೃಷಿಯನ್ನೇ ನೆಚ್ಚಿಕೊಂಡಿರುವುದು ಲಾಭಕಾರಿಯಲ್ಲ....
ಈ ಬಾರಿ ಬೆಂಗಳೂರು ಕೃಷಿವಿದ್ಯಾಲಯ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿದ್ದು ಗಮನಾರ್ಹ. ಮಳಿಗೆಗಳ ವ್ಯವಸ್ಥಾಪನೆ, ಕೃಷಿಕರ ಗಮನ ಸೆಳೆಯುವಿಕೆ ಹಿಂದಿನ ವರ್ಷಗಳಿಗಿತಲೂ ಅಚ್ಚುಕಟ್ಟು. ನಾಲ್ಕು ದಿನದ ಅವಧಿಯಲ್ಲಿ ಒಟ್ಟು ನಾಲ್ಕು ಲಕ್ಷ ಜನ ಭಾಗವಹಿದ್ದಾರೆಂಬ ಅಂದಾಜು.
ಪ್ರಾತ್ಯಕ್ಷಿಕೆ ತಾಕುಗಳಸನಿಹದಲ್ಲಿಯೇ ಮಳಿಗೆಗಳಿದ್ದವು.ಇದರಿಂದ ರೈತರು ಆಸಕ್ತರು ಹೆಚ್ಚು ದೂರ ನಡೆಯುವ ಪ್ರಮೇಯವಿರಲಿಲ್ಲ. ಮಳಿಗೆಗಳ ಮಧ್ಯದಲ್ಲಿಯೇ ಸಭಾಂಗಣವಿದ್ದರಿಂದ ಪ್ರೇಕ್ಷಕರಕೊರತೆಯಿರಲಿಲ್ಲ. ಸಾವಯವ ಕೃಷಿ ಬಗ್ಗೆ ಆದ್ಯತೆ ನೀಡಲಾಗಿತ್ತು. ಸಾವಯವ ಕೃಷಿಯಲ್ಲಿ ಸಾಧನೆಮಾಡಿದ ರೈತರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರಿಂದ ಹೆಚ್ಚು ಪ್ರಯೋಜನವಾಯಿತು. ಇಂಥಉಪನ್ಯಾಗಳ ಸಂದರ್ಭದಲ್ಲಿ ರೈತರು ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿಚರ್ಚೆ-ಸಂವಾದದಲ್ಲಿ ತೊಡಗಿಸಿಕೊಂಡಿದ್ದು ಅವರ ಆಸಕ್ತಿಯನ್ನು ವ್ಯಕ್ತಪಡಿಸುತ್ತಿತ್ತು.
ಹೊಸತಳಿ:
ಕೃಷಿಮೇಳದ ಸಂದರ್ಭದಲ್ಲಿ ಹೊಸತಳಿಗಳನ್ನು ಬಿಡುಗಡೆ ಮಾಡಲಾಯಿತು. ಕಡಿಮೆ ಅವಧಿಯಭತ್ತದ ತಳಿಕೆಎಂಪಿ-105, ಅಧಿಕ ಇಳುವರಿಯೊಂದಿಗೆ ಜಾನುವಾರುಗಳಿಗೂ ಅಧಿಕ ಮೇವು ಒದಗಿಸುವ ಮುಸುಕಿನ ಜೋಳದ ಸಂಕರಣ ತಳಿ - ಎನ್.ಎ.ಹೆಚ್ 1137(ಹೇಮ), ಹೆಚ್ಚು ಇಳುವರಿ ನೀಡುವ ಶೇಂಗಾ ತಳಿಕೆ.ಸಿ.ಜಿ, ಸೋಯಾ ಅವರೆ ತಳಿ ಎಂ.ಎ.ಯು.ಎಸ್(ಪೂಜಾ), ಅಲಸಂದೆ ತಳಿ ಪಿ.ಕೆ.ಬಿ-4 ಲೋಕಾರ್ಪಣೆಯಾದವು. ಇದೇ ಸಂದರ್ಭದಲ್ಲಿ ಸಮೃದ್ದ ಇಳುವರಿ ನೀಡುವ ಸೂರ್ಯಕಾಂತಿ ತಳಿಗಳಪ್ರದರ್ಶನವಿತ್ತು.
ಸಾವಯವ ಕೃಷಿ:
ಮೇಳದಲ್ಲಿ ಸಾವಯವ ಕೃಷಿ ವಿಭಾಗ ಭಾಗವಹಿಸಿದವರ ಗಮನ ಸೆಳೆಯಿತು. ರಾಜ್ಯದ ವಿವಿಧ ಭಾಗಗಳಲ್ಲಿಸಾವಯವ ಗ್ರಾಮ ಯೋಜನೆಯಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಸಾಧನೆ ತೋರಿಸುವಅಂಶಗಳನ್ನು ಮಳಿಗೆಗಳಲ್ಲಿಟ್ಟಿದ್ದರು. ಕೃಷಿಕರ ಸಾಧನೆ ವಿವರಿಸುವ ಪುಸ್ತಕಗಳು, ನಾಟಿ ತಳಿಯ ಬಿತ್ತನೆಬೀಜಗಳು, ರೈತ ಮಹಿಳೆಯರೇ ತಯಾರಿಸಿದ ಮೌಲ್ಯಧಾರಿತ ಕೃಷಿ ಉತ್ಪನ್ನಗಳು ಅಲ್ಲಿದ್ದವು.
ಜಾನುವಾರು ಪ್ರದರ್ಶನ:
ಇದಕ್ಕಾಗಿಯೂ ಪ್ರತ್ಯೇಕ ವಿಭಾಗವಿತ್ತು. ವಿದೇಶಿ ತಳಿ ಕುರಿಗಳು, ಎಮು ಪಕ್ಷಿಗಳು, ಮಿಶ್ರ ತಳಿಯ ಕೋಳಿಗಳು,ಜವಾರಿ ಎತ್ತುಗಳು ಗಮನ ಸೆಳೆದವು. ನಾಟಿ ಎತ್ತು-ಹಸುಗಳನ್ನು ಬಹಳ ಚೆನ್ನಾಗಿ ಸಾಕಿದ ಕೃಷಿಕರು ಅವುಗಳನ್ನು ಸಾಕಿದ ಮತ್ತು ...