ನೀವು ದಟ್ಟಡವಿಗೆ ಹೋಗಿ ಅಲ್ಲಿ ಹೆಜ್ಜೇನು ಗೂಡುಗಳಿರುವ ಮರಗಳಿಂದ ದೂರ ನಿಂತು ನೋಡುತ್ತೀರಿ. ಅಲ್ಲಿ ಕಾಡಿನ ಇತರ ಭಾಗಗಳಂತೆ ಮಂಗಗಳ ಜಿಗಿದಾಟ, ಕುಣಿದಾಟ, ರೆಂಬೆ-ಕೊಂಬೆ ಜಗ್ಗುವುದ್ಯಾವುದೂ ಇರುವುದಿಲ್ಲ. ಕಾಡಾನೆಗಳು ಆ ಮರಗಳಿಗೆ ಮೈ ಉಜ್ಜುವುದಿಲ್ಲ. ತಮ್ಮ ಮರಿಗಳನ್ನು ಆ ಮರಗಳ ಬಳಿ ಬಿಡುವುದೂ ಇಲ್ಲ. ಕಾಡಂದಿಗಳು ಸಹ ಅಂಥ ಮರಗಳ ಬುಡಗಳನ್ನು ಕೋರೆಹಲ್ಲುಗಳಿಂದ ಕೆದಕುವ ಕೆಲಸ ಮಾಡುವುದಿಲ್ಲ. ವಿಧೇಯ ವಿದ್ಯಾರ್ಥಿಗಳಂತೆ ತಲೆಬಗ್ಗಿಸಿ, ಅಲ್ಲಿಂದ ಪಲಾಯನ ಮಾಡುತ್ತವೆ. ಇದಕ್ಕೆ ಕಾರಣ ಜೇನುಹುಳಗಳ ಭಯ.
ಕಾಡಂಚಿನಲ್ಲಿ ವ್ಯವಸಾಯ ಮಾಡುತ್ತಿರುವವರು ಬೆಳೆಗಳನ್ನು ಸದಾ ಎಚ್ಚರಿಕೆಯಿಂದ ಕಾವಲು ಕಾಯಬೇಕಾಗುತ್ತದೆ. ಅದರಲ್ಲಿಯೂ...
പഴം, പച്ചക്കറികൾ അങ്ങനെ എന്തുമാകടടെ അവ കൃഷി ചെയ്യുന്ന കർഷകരെ വെള്ളം കുടിപ്പിക്കുന്ന ഒന്നാണ് ധാന്യങ്ങളെ ആക്രമിക്കാനെത്തുന്ന പലതരം ഈച്ചകളും മറ്റനേകം കീടങ്ങളും . ധാന്യങ്ങളുടെ നല്ല വളർച്ചക്കായി സമയാസമയത്ത് മരുന്നുകൾ അടിച്ചാലും ഇവ ചിലപ്പോ ഒഴിഞ്ഞ് പോകാറില്ല. ഉയർന്ന വിലയും പല തരം കാടനാശിനികൾ വാങ്ങാൻ കർഷകരെ പിന്നോട്ട് വലിക്കുന്ന ഒന്നാണ്, പരസ്യങ്ങളിലും കടകളിലും ഉയർന്ന വിലക്ക് ലഭിയ്ക്കുന്ന നല്ലയിനം കീടനാശിനികൾക്ക് ബദലായി കുറഞ്ഞ വിലയിൽ കീടങ്ങളെ തുരത്താൻ ഇപ്പോൾ വിപണിയിൽ പുതിയതരം കെണി എത്തിക്കഴിഞ്ഞു.
ഉയർന്ന അളവിൽ രാസവസ്തുക്കളടങ്ങിയിരിയ്ക്കുന്ന കീടനാശിനികളുടെ ഉപയോഗം...
ಲೇಖನದ ಶೀರ್ಷಿಕೆ ಓದಿ ಈ ರೀತಿಯ ಹಾಳೆಗಳು ಇರಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತದೆ. ರಾಸಾಯನಿಕ ಕೀಟನಾಶಕ ತರಲು ಹಣ ಸುರಿಯದೇ, ಯಾವುದೇ ಥರದ ಕೀಟನಾಶಕ ಸಿಂಪಡಿಸದೇ ಹಾನಿಕಾರಕ ಕೀಟಗಳನ್ನು ನಿಯಂತ್ರಿಸುವ ಇಂಥ ಹಾಳೆಗಳಿಗೆ ಮ್ಯಾಜಿಕ್ ಸ್ಟಿಕ್ಕರ್ಸ್ ಎಂದು ಸಹ ಕರೆಯುತ್ತಾರೆ.
ಇವುಗಳಲ್ಲಿ ನೀಲಿ ಮತ್ತು ಹಳದಿ ಹಾಳೆಗಳಿವೆ. ಮೊದಲಿಗೆ ಹಳದಿ ಹಾಳೆಯ ವಿಶೇಷತೆಗಳನ್ನು ಗಮನಿಸೋಣ. ವಿಶೇಷ ಹಳದಿ ಅಂಟು ಬಲೆಗಳು ಹಾರುವ ಕೀಟಗಳ ಕಣ್ಣುಗಳಿಗೆ ಚಿಗುರುವ ಎಲೆಗೊಂಚಲಿನಂತೆ ಕಾಣುತ್ತವೆ. ಇದರಿಂದ ಆಕರ್ಷಿತವಾಗಿ ಬರುವ ಕೀಟಗಳು ಹಾಳೆಯ ಮೇಲೆ ಕುಳಿತೊಡನೆ ಅಲ್ಲಿರುವ...
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಡಿಕೆ ಹಾಳೆಯನ್ನು ಅವಲಕ್ಕಿ ರೂಪಕ್ಕೆ ತರುವ ಘಟಕ ಸ್ಥಾಪಿತವಾಗಿದೆ. ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ, ಪುತ್ತೂರಿನ ಕರ್ನಾಟಕ ಹಾಲು ಮಹಾ ಮಂಡಳಿ ಘಟಕ ಮತ್ತು ಪಾಣಾಜೆ ಹಾಲು ಉತ್ಪಾದಕರ ಸಂಘದ ಸಂಯುಕ್ತ ಶ್ರಮ-ಆಸಕ್ತಿಯಿಂದ ಈ ಘಟಕ ಆರಂಭವಾಗಿದೆ. ಯಂತ್ರಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿಯೇ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲಾಗಿದೆ. ಯಂತ್ರೋಪಕರಣಗಳನ್ನು ಖರೀದಿಸಲು ನಾಲ್ಕು ಲಕ್ಷ ವೆಚ್ಚವಾಗಿದೆ. ಇದಕ್ಕೆ ನಬಾರ್ಡ್ ಕೂಡ ಆರ್ಥಿಕ ಸಹಾಯ ನೀಡಿದೆ. ಕಟ್ಟಡ...
ತೋಟಗಾರಿಕೆ:
ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್.
ರಾಮನಗರ , ಧಾರವಾಡ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ. ಅನುದಾನ.
ಕೃಷಿ :
ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ ಒಟ್ಟಾರೆ ರೂ. 472 ಕೋಟಿ ಅನುದಾನ.
ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ...
ಇತ್ತೀಚೆಗೆ ಸುತ್ತೂರು ಜಾತ್ರೆಯ ಅಂಗವಾಗಿ ನಡೆದ ಕೃಷಿ ಗೋಷ್ಠಿಯಲ್ಲಿ ನನ್ನ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದವರ ಪೈಕಿ ನನಗೆ ಹೆಚ್ಚು ಇಷ್ಟವಾದವರು ಆನೇಕಲ್ ತಾಲ್ಲೂಕಿನ ಕಂಬಳೀಪುರದ ಸಾವಯವ ರೈತ ಕಾಂತರಾಜು. ಇವರ ಬಗ್ಗೆ ಅಲ್ಲಲ್ಲಿ ಕೇಳಿದ್ದ ನಾನು ಕಳೆದ ಸಲ ಬೆಂಗಳೂರಿನಲ್ಲಿ ನಡೆದ ಕೃಷಿಮೇಳಕ್ಕೆ ಹೋಗಿದ್ದಾಗ ಭೇಟಿಮಾಡಲು ಪ್ರಯತ್ನಿಸಿದ್ದೆ, ಕರೆ ಮಾಡಿದಾಗ ಅವರು ತೋಟದಲ್ಲಿ ಇರಲಿಲ್ಲ. ಅನ್ಯ ಕೆಲಸ ನಿಮಿತ್ತ ಆಚೆ ಹೋಗಿದ್ದರು.
ಅರಸುವ ಬಳ್ಳಿ ಕಾಲಸುತ್ತಿಕೊಂಡಂತೆ ಇಬ್ಬರೂ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದೇವು .ಇದನ್ನೇ ಅಸ್ತಿತ್ವದ ಆಟ, ನಾವು ತೀವ್ರವಾಗಿ ಬಯಸಿದ್ದು ಆಗಿಯೇ ಆಗುತ್ತದೆ...
ಅಪ್ಪನ ಕಾಲದಿಂದ ಅರಿಶಿಣ ಬೆಳೆಯುತ್ತಿದ್ದೇವೆ.ಮೂರು ದಶಕಗಳ ಅನುಭವ ನಮ್ಮದು.ತಮಿಳುನಾಡಿನ ರೈತರು ನಮ್ಮಲ್ಲಿ ಬೇಸಾಯ ಮಾಡಲು ಬಂದಾಗ ನಮಗೆ ಅರಿಶಿಣ ಬೇಸಾಯ ಕಲಿಸಿಕೊಟ್ಟರು. ಅರಿಶಿನದ ಜೊತೆ ಈರುಳ್ಳಿ ಅಥವಾ ಬೀನ್ಸ್ ಅನ್ನು ಮಿಶ್ರ ಬೆಳೆಯಾಗಿ ಮಾಡುತ್ತಿದ್ದೆವು. ಅದನ್ನು ಬಿಟ್ಟರೆ ಬೇರೆ ಪ್ರಯೋಗ ಮಾಡುತ್ತಿರಲಿಲ್ಲ.
ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದ ಯುವರೈತ ಮಹಾದೇವಶೆಟ್ಟಿ ಅರಿಶಿಣದ ಜೊತೆ ಕೊತ್ತಂಬರಿ (ಧನಿಯಾ), ಈರುಳ್ಳಿ, ಮೆಣಸಿನಕಾಯಿ ಹೀಗೆ ಒಟ್ಟು ನಾಲ್ಕು ಬೆಳೆಗಳನ್ನು ಸಂಯೋಜನೆ ಮಾಡಿ ಮಿಶ್ರ ಬೇಸಾಯ ಮಾಡುವುದರಿಂದ ಹೇಗೆ ಲಾಭ ಪಡೆಯಬಹುದು ಎಂದು ತಮ್ಮ ಅನುಭವವನ್ನು ಹಂಚಿಕೊಂಡಾಗ ನಮಗೆಲ್ಲಾ ಅಚ್ಚರಿ !.
ಆಯರಹಳ್ಳಿಯ...
ಹಸಿರೆಲೆ ಗೊಬ್ಬರಗಳು ಮಣ್ಣಿನ ಭೌತಿಕ ರಚನೆ ಹಾಗೂ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ. ಭೂಮಿಯ ಮೇಲೆ ಹೇರಳವಾಗಿ ಸ್ವಾಭಾವಿಕವಾಗಿ ಬೆಳೆದಿರುವ ಅನೇಕ ಜಾತಿಯ ಹಸಿರು ಗಿಡಗಳನ್ನು ಹಸಿರೆಲೆ ಗೊಬ್ಬರವಾಗಿ ಬಳಸಬಹುದಾಗಿದೆ. ಈ ಸಾಲಿಗೆ ಲ್ಯಾಂಟನಾ (ಲಂಟಾನ)ಕೂಡ ಸೇರ್ಪಡೆಯಾಗುತ್ತದೆ. ಇದರ ವೈಜ್ಞಾನಿಕ ಹೆಸರು Lantana camera
ಲ್ಯಾಂಟನಾ ಸಸ್ಯ : ಗ್ರಾಮೀಣ ಪ್ರದೇಶಗಳಲ್ಲಿ ಲ್ಯಾಂಟನ ಪೊದೆಗಳನ್ನು 'ರೋಜುವಾಳಿ' 'ಹುಣ್ಣಿ ಗಿಡ' ಎಂಬ ಹೆಸರಿನಿಂದ ಕರೆಯುತ್ತಾರೆ. ಅತ್ಯಂತ ವೇಗವಾಗಿ ಬೆಳೆಯುವ ಈ ಸಸ್ಯ ಹೊಲ, ಗದ್ಧೆ, ಕಾಡು, ಒಣಭೂಮಿ ಹೀಗೆ ಎಲ್ಲೆಂದರಲ್ಲಿ ಕೃಷಿ ಹಾಗೂ ಕೃಷಿಯೇತರ ಭೂಮಿಯನ್ನು ಆವರಿಸಿಕೊಂಡು...
ಸಾಂಪ್ರದಾಯಿ ರೀತಿಯಲ್ಲಿ ಜೇನು ಸಂಗ್ರಹಣೆ ಮಾಡುವುದರಿಂದ ಜೇನುಕುಟುಂಬಗಳು ನಾಶವಾಗುವ ಸಾಧ್ಯತೆಗಳು ಅಧಿಕ. ಆದ್ದರಿಂದ ಈ ಕಾರ್ಯ ಮಾಡುವಾಗ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರಪ್ರಸಾದ್ ಸಲಹೆ ನೀಡಿದದರು.
ಅವರು ಇಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಅಖಿತ ಭಾರತ ಸುಸಂಘಟಿತ ಜೇನುನೋಣ ಮತ್ತು ಪರಾಗಸ್ಪರ್ಶಗಳ ಸಂಶೋಧನಾ ಪ್ರಾಯೋಜನೆ, ಕರ್ನಾಟಕ ರಾಜ್ಯ ತೋಟಗಾರಿಕೆ ಮಿಷನ್ ಏಜೆನ್ಸಿ. ತೋಟಗಾರಿಕೆ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಂಯುಕ್ತ ಆಶ್ರಯದಲ್ಲಿ "ಅಧಿಕ ಬೆಳೆ ಇಳುವರಿ ಮತ್ತು ಸುಸ್ಥಿರ ಅದಾಯಕ್ಕಾಗಿ ಜೇನುಕೃಷಿ" ರಾಜ್ಯಮಟ್ಟದ ಜೇನು...
ಸೂಬಾಬುಲ್,ಇದನ್ನು ಮೆಕ್ಸಿಕೋದ ಮಾಯಾ ಮತ್ತು ಜಾಪೋಟೆಕ್ ಎಂಬ ಗುಡ್ಡಗಾಡು ಜನರು ಬೆಳೆಯುತ್ತಿದ್ದರು. ಇದೊಂದು ಬಹುಪಯೋಗಿ. ಇದು ಹೆಚ್ಚು ಪ್ರೋಟೀನು ಒಳಗೊಂಡ ಮೇವು, ಸಾವಯವ ಗೊಬ್ಬರವಾಗಿ, ಮರವಾಗಿ, ಉರುವಲಾಗಿ, ಪ್ಲಾಂಟೇಷನುಗಳಲ್ಲಿ, ಕೋಕೋ, ಕ್ವಿನೈನ್, ಕಾಫಿ, ಟೀ, ವೆನಿಲ್ಲಾಗಳಿಗೆ ನೆರಳು ಕೊಡುವ ಮರ.
ಸೂಬಾಬುಲ್ (ಲ್ಯುಸೇನಾ ಲ್ಯೂಕೋಸೆಫಲಾ) ಮುಳ್ಳಿಲ್ಲದ ಗರಿಯೋಪಾದಿಯ ಎಲೆಗಳುಳ್ಳ, ಸಣ್ಣ ಆಕರ್ಷಕ ಹೂವುಗಳುಳ್ಳ, ಹಚ್ಚ ಹಸಿರಾದ ಕಾಯಿಗಳಿಂದ ಕೂಡಿದ ಮರ.ಕಾಯಿ ಬಲಿಯುತ್ತಿದ್ದಂತೆ ಕಂದು ಬಣ್ಣಕ್ಕೆ ತಿರುಗುತ್ತವೆ. ಇದರ ಬೇರುಗಳು ಗಟ್ಟಿಯಾದ ಮಣ್ಣಿನಲ್ಲೂ ಬಹು ಆಳಕ್ಕೆ ಇಳಿಯುತ್ತವೆ. ವಾತಾವರಣದಲ್ಲಿನ ಸಾರಜನಕವನ್ನು ನೇರವಾಗಿ ಬಳಸುವ ಸಾಮಥ್ರ್ಯವುಳ್ಳ ವೃಕ್ಷ....