ಹವಾಮಾನ ಮುನ್ಸೂಚನೆ: ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

0

ಹವಾಮಾನ ಮುನ್ಸೂಚನೆ:

14 ನೇ ಡಿಸೆಂಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು  ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ಕರಾವಳಿಯ ಬಹುತೇಕ ಕಡೆಗಳಲ್ಲಿ; ದಕ್ಷಿಣ ಒಳನಾಡಿನ ಹಲವು  ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ  ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಗುಡುಗು ಮುನ್ಸೂಚನೆ : ಮುಂದಿನ 24 ಘಂಟೆಗಳಲ್ಲಿ:  ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಭಾರೀ ಮಳೆಯ ಎಚ್ಚರಿಕೆ:

ಮುಂದಿನ 24 ಗಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು  ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮೀನುಗಾರರಿಗೆ ಎಚ್ಚರಿಕೆ:  ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಘಂಟೆಗೆ 40 – 45 ಕಿ.ಮೀ. ಇರಲಿದ್ದು, 55 ಕಿ.ಮೀ. ವರೆಗೂ ತಲುಪುವ ಸಾಧ್ಯತೆ ಇದೆ.   ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.

ಮುಂದಿನ 24 ಘಂಟೆಗಳ ಹೊರನೋಟ:

ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಬೆಂಗಳೂರು:

14 ನೇ ಡಿಸೆಂಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: :  ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 24 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು:  ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ದಾಖಲಾದ ಹವಾಮಾನ ವರದಿ:

ಸೋಮವಾರ  12 ನೇ ಡಿಸೆಂಬರ್ 2022 / 21 ನೇ ಅಗ್ರಹಾಯಣ 1944 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:

ರಾಜ್ಯದ  ಬಹುತೇಕ  ಕಡೆಗಳಲ್ಲಿ  ಮಳೆಯಾಗಿದೆ.

ಮುಖ್ಯ ಮಳೆಯ ಪ್ರಮಾಣ (ಸೆಂ. ಮೀ.ಗಳಲ್ಲಿ): ಹುಂಚದಕಟ್ಟೆ  (ಶಿವಮೊಗ್ಗ ಜಿಲ್ಲೆ), ಚಾಮರಾಜನಗರ ತಲಾ 4; ಸಿದ್ದಾಪುರ , ಸಿದ್ದಾಪುರ ARG (ಎರಡೂ ಉಡುಪಿ ಜಿಲ್ಲೆ), ಗಂಗಾವತಿ ARG (ಕೊಪ್ಪಳ ಜಿಲ್ಲೆ) , ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ), ಜಯಪುರ, ಬಾಳೆಹೊನ್ನೂರು, ಕೊಪ್ಪ, ಕಳಸ (ಎಲ್ಲವೂ ಚಿಕ್ಕಮಗಳೂರು ಜಿಲ್ಲೆ) ತಲಾ 3; ಹೊನ್ನಾವರ  (ಉತ್ತರ ಕನ್ನಡ ಜಿಲ್ಲೆ) , ಕೋಟ (ಉಡುಪಿ ಜಿಲ್ಲೆ) , ಕುಷ್ಟಗಿ, ಗಂಗಾವತಿ, ತಾವರಗೇರಾ (ಎಲ್ಲಾ ಕೊಪ್ಪಳ ಜಿಲ್ಲೆ) , ಲಕ್ಷ್ಮೇಶ್ವರ (ಗದಗ ಜಿಲ್ಲೆ) , ಹುಕ್ಕೇರಿ (ಬೆಳಗಾವಿ ಜಿಲ್ಲೆ) ,  ಎಂಪ್ರಿ (ಬೆಂಗಳೂರು ನಗರ ಜಿಲ್ಲೆ) , ಕಡೂರು, ಯಗಟಿ, ಅಜ್ಜಂಪುರ, ಶೃಂಗೇರಿ ಎಚ್‌ಎಂಎಸ್ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ) , ನಿಡಿಗೆ, ಅಗರಹರ ಕೋಣಂದೂರು (ಎಲ್ಲಾ ಶಿವಮೊಗ್ಗ ಜಿಲ್ಲೆ) , ತಿಪಟೂರು, ಬುಕ್ಕಪಟ್ಟಣ, ಮಧುಗಿರಿ (ಎಲ್ಲಾ ತುಮಕೂರು ನಗರ ಜಿಲ್ಲೆ) , ಬೆಂಗಳೂರು ನಗರ, ಹೊನ್ನಾಳಿ (ದಾವಣಗೆರೆ ಜಿಲ್ಲೆ),  , ಕಂಪ್ಲಿ (ಬಳ್ಳಾರಿ ಜಿಲ್ಲೆ) , ಹಿರಿಯೂರು ಎಚ್‌ಎಂಎಸ್, ಬಿ ದುರ್ಗ (ಎರಡೂ ಚಿತ್ರದುರ್ಗ ಜಿಲ್ಲೆ) ತಲಾ 2; ಕ್ಯಾಸಲ್ ರಾಕ್, ಕದ್ರಾ, ಗೋಕರ್ಣ, ಶಿರಾಲಿ, ಕಾರವಾರ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಕುಂದಾಪುರ, ಕೊಲ್ಲೂರು (ಎರಡೂ ಉಡುಪಿ), ಉಪ್ಪಿನಂಗಡಿ, ಪುತ್ತೂರು, ಮಣಿ (ಎಲ್ಲ ದಕ್ಷಿಣ ಕನ್ನಡ ಜಿಲ್ಲೆ) , ಇಳಕಲ್ (ಬಾಗಲಕೋಟೆ ಜಿಲ್ಲೆ) , ಸಂಕೇಶ್ವರ (ಬೆಳಗಾವಿ ಜಿಲ್ಲೆ) ಯಲಬುರ್ಗಾ (ಕೊಪ್ಪಳ ಜಿಲ್ಲೆ), ಬೆಳ್ಳಟ್ಟಿ (ಗದಗ ಜಿಲ್ಲೆ), ಮುದಗಲ್ (ರಾಯಚೂರು ಜಿಲ್ಲೆ), ಹುಣಸಗಿ (ಯಾದಗಿರಿ ಜಿಲ್ಲೆ), ಚಿಕ್ಕಮಗಳೂರು, ಶಿವಮೊಗ್ಗ, ಎಲೆಕ್ಟ್ರಾನಿಕ್ ಸಿಟಿ ARG, ಜ್ಞಾನಭಾರತಿ  ಕ್ಯಾಂಪಸ್, ಉತ್ತರಹಳ್ಳಿ, ಕೆಎಸ್‌ಎನ್‌ಡಿಎಂಸಿ  ಕ್ಯಾಂಪುಸ್ (ಎಲ್ಲಾ ಬೆಂಗಳೂರು ನಗರ ಜಿಲ್ಲೆ),  ಗುಬ್ಬಿ, ಹೆಬ್ಬೂರು , ಸಿರಾ (ಎಲ್ಲಾ ತುಮಕೂರು ಜಿಲ್ಲೆ) , ಹುಣಸೂರು, ಸಾಲಿಗ್ರಾಮ, ಟಿ ನರಸೀಪುರ, ಸರಗೂರು (ಎಲ್ಲಾ ಮೈಸೂರು ಜಿಲ್ಲೆ) , ಬೆಂಗಳೂರು ಹೆಚ್.ಎ.ಎಲ್. ವಿಮಾನ ನಿಲ್ದಾಣ, ಮದ್ದೂರು, ಬೆಳ್ಳೂರು, ಮಳವಳ್ಳಿ (ಎಲ್ಲಾ ಮಂಡ್ಯ ಜಿಲ್ಲೆ) , ಶ್ರವಣಬೆಳಗೊಳ, ಸಿ ಆರ್ ಪಟ್ನಾ (ಎರಡೂ ಹಾಸನ ಜಿಲ್ಲೆ) ಕಾಟಿಕೆರೆ, ತ್ಯಾಗರ್ತಿ (ಎರಡೂ ಶಿವಮೊಗ್ಗ ಜಿಲ್ಲೆ), ಹೊಸಪೇಟೆ (ಬಳ್ಳಾರಿ ಜಿಲ್ಲೆ ), ಮಾಗಡಿ (ರಾಮನಗರ ಜಿಲ್ಲೆ ), ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ ) ತಲಾ 1.

ಅತೀ ಕಡಿಮೆ ಉಷ್ಣಾಂಶ:

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 13.3  ಡಿ.ಸೆ. ದಾವಣಗೆರೆಯಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here