Home Blog Page 122
ಜೇನು ದ್ರವಕ್ಕಾಗಿ ಮಾತ್ರ ಜೇನು ಸಾಕಾಣಿಕೆ ಮಾಡಲಾಗುತ್ತದೆ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಜೇನು ಸಾಕಾಣಿಕೆ ಕಾರ್ಯ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಕೃಷಿಗೆ ಇದರಿಂದಾಗುವ ಅನುಕೂಲ ಅಪರಿಮಿತ. ಅದರಲ್ಲೂ ಸಾವಯವ ಕೃಷಿಕರಿಗೆ ಇದೊಂದು ವರದಾನ. ಆದ್ದರಿಂದಲೇ ಸಾವಯವ ಕೃಷಿಕ್ಷೇತ್ರಗಳಲ್ಲಿ ಕೇಳಿಸುವ ಜೇನುಹುಳುಗಳ ಝೇಂಕಾರ, ರಾಸಾಯನಿಕ ಕೃಷಿಕ್ಷೇತ್ರದಲ್ಲಿ ಕೇಳಿಸುವುದಿಲ್ಲ. ಜೇನುಸಾಕಾಣಿಕೆಯನ್ನು ಕೈಗೊಳ್ಳುವುದರಿಂದ ಉಪಕಸುಬು ಆದಂತೆ ಆಗುತ್ತದೆ. ಜೊತೆಗೆ ಹೆಚ್ಚಿನ ಆದಾಯವೂ ದೊರೆಯುತ್ತದೆ. ಜೇನು ಇರುವ ಪರಿಸರದಲ್ಲಿ ಇಳುವರಿ ಹೆಚ್ಚಾಗುವ ಲಾಭವೂ ಕೃಷಿಕರಿಗೆ ದೊರೆಯುತ್ತದೆ. ಅಲ್ಲದೇ ಜೇನು ಪರಾಗಸ್ಪರ್ಶ ಕ್ರಿಯೆ ಆಗಿರುವ-ಸಾವಯವ ಕೃಷಿಯನ್ನೂ ಅಳವಡಿಸಿಕೊಂಡು ಬೆಳೆದ ಕೃಷಿ...
ಬೆಳೆಗಳನ್ನು ಉತ್ತಮವಾಗಿ ಬೆಳೆದು, ಅತ್ಯುತ್ತಮ ಇಳುವರಿ ಪಡೆಯಲು ಪ್ರತಿಯೊಬ್ಬ ಕೃಷಿಕರೂ ಶ್ರಮಿಸುತ್ತಾರೆ. ಇದಕ್ಕಾಗಿ ಸಮಯ, ಶ‍್ರಮ, ಹಣ ವಿನಿಯೋಗಿಸುತ್ತಾರೆ. ಇವರು ಪಟ್ಟಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಾದ ಅತಿವೃಷ್ಟಿ-ಅನಾವೃಷ್ಟಿಗಳಿಂದಲೂ ಬೆಳೆ ಹಾಳಾಗುತ್ತದೆ. ಇದನ್ನು ಹೊರತುಪಡಿಸಿದ ಸಂದರ್ಭಗಳಲ್ಲಿಯೂ ನಿರೀಕ್ಷಿತ ಪ್ರಮಾಣದ ಇಳುವರಿ ದೊರೆಯದಿದ್ದರೆ ಅದು ತೀವ್ರವಾಗಿ ಚಿಂತಿಸಿ, ಸೂಕ್ತಕ್ರಮ ತೆಗೆದುಕೊಳ್ಳಬೇಕಾದ ಸಂಗತಿ. ಯಾವುದೇ ಬೆಳೆಗಳನ್ನು ಬೆಳೆಯುವ ಮುನ್ನ ಮಣ್ಣಿನ ಗುಣಧರ್ಮ, ಅದರ ರಸಸಾರದ ಮಟ್ಟ ತಿಳಿಯುವುದು ಅತ್ಯಗತ್ಯ. ಮಣ್ಣಿನಲ್ಲಿ ಯಾವ ಬಗೆಯ ಪೋಷಕಾಂಶಗಳಿವೆ, ಯಾವುದರ ಕೊರತೆ ಇದೆ ಎಂದು ತಿಳಿಯುವುದು...
चूहा मूल रूप से एक संदेहवाला प्राणी होता है| जहर गंध चूहोंको जल्दी पता चल जाने के कारण वे उनसे दूर रहा जाते है| यही जो कारण है,  चूहों को मारनेवाले रासायनिकयुक्त विष ज्यादातर असफल हो जाते है| रासायनिक जहर से खाद का पौधा  (gliricidia )जो है वह परिणामकारी औषधि है जो चूहों को आसानी से मार सके| ज्यादातर...
ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಯಾವಾಗಲೂ ಅಪಾಯಕಾರಿ. ಒಂದೇ ಬೇಳೆ ಹಾಕುವ ಬದಲು ಎರಡು ಅಥವಾ ಹೆಚ್ಚು ಬೆಳೆಗಳನ್ನು ಹಾಕುವುದು ಸೂಕ್ತ. ಇವುಗಳಲ್ಲಿ ಯಾವುದೇ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಕೈ ಹಿಡಿಯುತ್ತವೆ. ರೈತರು ನಷ್ಟಕ್ಕೀಡಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಪೂರಕ ಬೆಳೆಗಳ ಬಗ್ಗೆ, ಅವುಗಳ ಪದ್ಧತಿಗಳ ಬಗ್ಗೆ ಕೃಷಿ ವಿಜ್ಙಾನಿಗಳು ಸಂಶೋಧನೆ ಮಾಡಿದ್ದಾರೆ. ರಾಸಾಯನಿಕ ಪದ್ಧತಿ ಕೃಷಿ ಹೆಚ್ಚು ಚಾಲ್ತಿಗೆ ಬಂದ ನಂತರವೇ ಏಕಬೆಳೆ ಪದ್ಧತಿಯೂ ಹೆಚ್ಚಾಯಿತು. ನಿರ್ವಹಣೆ ಸುಲಭವಾಗುವುದು ಕೂಡ ಇದಕ್ಕೆ ಕಾರಣವಾದ ಅಂಶ. ಆದರೆ ಏಕಬೆಳೆ ಪದ್ಧತಿಯಿಂದ ಆಗುವ ತೊಂದರೆಗಳು...
ರಾಷ್ಟ್ರದಲ್ಲಿ ರಾಜಸ್ಥಾನ ರಾಜ್ಯ ನಂತರ ಅತಿಹೆಚ್ಚು ವಿಸ್ತಾರದ ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿ ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಇಂಥ ಜಮೀನುಗಳನ್ನು ಅವಲಂಬಿಸಿ ಸಾಗುವಳಿ ಮಾಡುತ್ತಿರುವವರಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಸಂಖ್ಯೆ ಅಧಿಕ. ಇವರು ಸುಸ್ಥಿರ ಮಾದರಿಯಲ್ಲಿ ಕೃಷಿ ಮಾಡಲು ಸಹಾಯಕವಾಗುವಂತೆ ವಿವಿಧ ಪದ್ಧತಿಗಳು ಅಭಿವೃದ್ಧಿಯಾಗಿವೆ. ರಾಷ್ಟ್ರದಲ್ಲಿನ ಕೃಷಿಯನ್ನು ಮುಂಗಾರು ಮಳೆಯೊಂದಿಗಿನ ಜೂಜಾಟ ಎಂತಲೇ ಕರೆಯಲಾಗುತ್ತದೆ. ಮಳೆ ಅನಿಶ್ಚತತೆ ಇದ್ದ ಸಂದರ್ಭಗಳಲ್ಲಿ ಅದು ಕೃಷಿಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮಳೆ ತಡವಾಗಿ ಬಂದು ಅದರ ಹಂಗಾಮು ಮುಕ್ತಾಯವಾಗುವ ಹಂತದಲ್ಲಿ...
Farmers from Jharkhand’s Singhbhum district, a tribal area, alleged that the government and industrialists are trying to destroy their traditional knowledge of agriculture and looting cultivable land. This happened on the last day of a conference held on ‘Traditional agriculture: challenges and possibilities’ at Chaibasa this month. These farmers belonged to Gangaram Kalundia Forum, named after a leader who was...
Originally, rats and bandicoots are suspicious animals.  They quickly detect the furious poisons smell and abandoned.  So, the chemical poisons are not so successful in killing rats.  Instead, bandicoots can be effectively controlled by using fertilizer plant. gliricidia is known for all farmers.  It is called as fertilizer plant. In fact, Greek people used this plant to control rats-bandicoots.  In Greek,...
ಗೇರು ಕೃಷಿಯು  ಬರೀ ಬರಡು ಭೂಮಿಯನ್ನು ಹಸಿರಾಗಿಸಲು ಉಪಯೋಗಿಸುವ ವೃಕ್ಷಗಳು ಮಾತ್ರವಲ್ಲ;ಕೃಷಿಕನ ಆರ್ಥಿಕ ಭದ್ರತೆಗೆ ಬುನಾಧಿಯಾಗುವಂತಹ  ವರಮಾನದ ಕೊಡುಗೆಯೂ ಹೌದು. ಅಲ್ಲದೇ ಹಲವಾರು ಪ್ರಾಣಿ ಪಕ್ಷಿಗಳಿಗೆ,  ಆಹಾರ ಒದಗಿಸುವ ಈ ಹಣ್ಣಿನ ಮರ. ಬಂಜರು ಭೂಮಿಗೆ  ವರದಾನ. ಪೋಷಕಾಂಶಗಳು: ಗೇರು ಗಿಡಗಳನ್ನು ನಾಟಿ ಮಾಡುವ ಮೊದಲು ಮಣ್ಣಿಗೆ ಸಾಕಷ್ಟು ಸಾವಯವ ಗೊಬ್ಬರವನ್ನು ಸೇರಿಸಿರಬೇಕು. ಗಿಡಗಳು ಬೆಳೆದು ನಾಲ್ಕು ವರ್ಷವಾದಾಗ  ಪ್ರತಿ ಮರಕ್ಕೆ 10 ರಿಂದ 15 kg ಹಟ್ಟಿಗೊಬ್ಬರವನ್ನು ಒದಗಿಸಬೇಕು . ಇದನ್ನು  ಮರದ ಬುಡದಿಂದ 2 ರಿಂದ 3 ಅಡಿ ಅಂತರದಲ್ಲಿ ವೃತ್ತಾಕಾರವಾಗಿ...
ಹೌದು, ಕೇಳಿದರೆ ಆಶ್ಚರ್ಯ, ನಂಬವುದು ಕಷ್ಟ. ಆದರೂ, ಸತ್ಯ. ಸಾಧ್ಯವೆಂದು ತೋರಿಸಿದ್ದು ಶಂಕರೇಗೌಡ್ರು. ಮೈಸೂರು ತಾಲ್ಲೂಕಿನ ದೇವಗಳ್ಳಿಯವರು. ದಶಕದಿಂದ ಸಾವಯವದ ನಂಟು. ಆರೆಕರೆಯಲ್ಲಿ ಅರವತ್ತಕ್ಕೂ ಹೆಚ್ಚು ಬೆಳೆ. ಏಳು ಗುಂಟೆ, ಆರೆಕರೆ, ಏನಿದು? ಇರಿ, ನಾನು ಹೇಳ ಹೊರಟಿರುವುದು, ಇವರು ಏಳು ಗುಂಟೆಯಲ್ಲಿ ಬೆಳೆವ ಅರಿಶಿಣದ ಬಗೆಗೆ ಮಾತ್ರ. ಅರಿಶಿಣವೇ ಏಕೆ: ಗೌಡರು ಬೆಳೆವ ಬೆಳೆಗಳಲ್ಲಿ ಅರಿಶಿಣವೂ ಒಂದು. ಸದ್ಯ ಇವರು ಬೆಳೆಯುತ್ತಿರುವ ತಳಿ 'ಈರೋಡ್ ಲೋಕಲ್'. ಮೊನ್ನೆ ತಾಯೂರಿನಲ್ಲಿ ಅರಿಶಿಣ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಗೌಡರು ಸಹ ಕೃಷಿಕರೊಟ್ಟಿಗೆ ತಮ್ಮ ಲಕ್ಷ ಗಳಿಕೆಯ ಬಗೆಗೆ...
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಲೂಜ್ ಗ್ರಾಮದ ಯುವಕೃಷಿಕ ಶಂಕರ್ ಪಾಟೀಲ್ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು. ಎರಡುವರ್ಷದ ಹಿಂದೆ ಇದೇ ಸಮಯದಲ್ಲಿ ಇದೇಖುಷಿ ಅವರಲ್ಲಿ ಕಾಣುತ್ತಿರಲಿಲ್ಲ. "ಏನು ಭಾರಿ ಖುಷಿಯಲ್ಲಿದ್ದೀರಾ" ಎಂದಾಗ ಮುಗುಳ್ನಗೆಯೊಡನೆ ಮಾತು ಆರಂಭಿಸಿದರು. "ಕಳೆದ ಹತ್ತು ವರ್ಷಗಳಿಂದ ಬಾಳೆ ಬೆಳೆಯುತ್ತಿದ್ದೇವೆ. ಪ್ರತಿವರ್ಷ ಏನಾದರೊಂದು ತೊಂದರೆ. ಅಷ್ಟು ಉತ್ತಮವಾದ ಇಳುವರಿ ಸಿಗುತ್ತಿರಲಿಲ್ಲ. ಕೀಟಬಾಧೆ, ರೋಗಬಾಧೆ ಹೀಗೆ ಏನಾದರೊಂದು ಸಮಸ್ಯೆ ಇದ್ದೇಇರುತ್ತಿತ್ತು. ಆದರೆ ಈ ಬಾರಿಯ ಬಾಳೆ ಇವೆಲ್ಲದರಿಂದ ಮುಕ್ತವಾಗಿದೆ. ಮುಖ್ಯವಾಗಿ ಗಣನೀಯ ಪ್ರಮಾಣದಲ್ಲಿ ಖರ್ಚು ಕಡಿಮೆಯಾಗಿದೆ" ಎಂದರು. ಮಾತನಾಡುತ್ತಲೇ ಬಾಳೆತೋಟದಲ್ಲಿ ಮೂರು ಸುತ್ತು ಬಂದಾಗಿತ್ತು. ನಾಲ್ಕು...

Recent Posts