Home Blog Page 7
ಇತ್ತೀಚೆಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ ಐ ಟಿ) , ಮದ್ರಾಸಿನ ನಿರ್ದೇಶಕರು ಚೆನ್ನೈನ ಪಶ್ಚಿಮ ಮಾಂಬಲಂನಲ್ಲಿರುವ ಗೋಶಾಲೆಯಲ್ಲಿ, ಜಾನುವಾರುಗಳಿಗೆ ಮೀಸಲಾದ ‘ಮಟ್ಟು ಪೊಂಗಲ್’ ಹಬ್ಬದ ಸಂದರ್ಭದಲ್ಲಿ ಗೋಮೂತ್ರ ಕುರಿತು ಮಾತನಾಡಿದರು. “ಗೋಮೂತ್ರವು ಶಿಲೀಂದ್ರ ನಾಶಕ, ಜೀವ ನಿರೋಧಕ ಮತ್ತು ಊತ ನಿವಾರಕ ಔಷಧಿ ಎಂದು ಹೇಳಿದರು. ಅದರ ಪರ ಮತ್ತು ವಿರುದ್ಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದವು. ನಂತರ ಅವರು ಅದಕ್ಕೆ ಸಂಬಂಧಿಸಿದಂತೆ ಕೆಲವು ಸಂಶೋಧನಾ ಲೇಖನಗಳನ್ನೂ ಸಹ ಬಿಡುಗಡೆ ಮಾಡಿದರು. ಆದರೂ ಈ ಕುರಿತು ಎಂದಿನಂತೆ ಚರ್ಚೆ ಮುಂದುವರೆದಿದೆ. ಒಂದು ವಿಷಯ...
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯ ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರದ ಪ್ರಯೋಜನಕ್ಕೆ ಬಳಸಬಹುದು ಬೆಂಗಳೂರಿನಲ್ಲಿ ಇಂಧನ ತಂತ್ರಜ್ಞಾನ ಶೃಂಗಸಭೆಗೆ ಸಚಿವರಿಂದ ಚಾಲನೆ ಜೈವಿಕ ಇಂಧನ ಮಿಶ್ರಣದ ಮೂಲಕ ದೇಶವು ಆಮದು ಬಿಲ್‌ನಲ್ಲಿ 91,000 ಕೋಟಿ ರೂಪಾಯಿಗಳನ್ನು ಉಳಿಸಬಹುದು ಮತ್ತು ಈ ಹಣವನ್ನು ಕೃಷಿ ಕ್ಷೇತ್ರದ ಪ್ರಯೋಜನಕ್ಕಾಗಿ ಬಳಸಬಹುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು. ಬೆಂಗಳೂರಿನಲ್ಲಿ ಇಂದು 27ನೇ ʻಇಂಧನ ತಂತ್ರಜ್ಞಾನ...
ಈಗಾಗಲೇ ಹಿಂಗಾರಿ ಮಳೆಗಳ ಆರಂಭದಲ್ಲಿ ವಿಳಂಬ ಆಗಿರುವುದರಿಂದ ಕೆಲ ವಿಶೇಷ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ಹಿಂಗಾರಿ ಜೋಳ * ಜೋಳ ಬಿತ್ತುವವರು ಒಣ ಬಿತ್ತನೆ ಮಾಡಬಹುದು. * 3 ಮಿಲೀ ಕ್ಲೋರ್ ಪೈರಿಫಾಸ್, 3 ಗ್ರಾಂ ಕಾರ್ಬೆಂಡೆಜಿಂ ನಿಂದ ಪ್ರತಿ ಕೆಜಿ ಬೀಜಗಳನ್ನು ಉಪಚರಿಸಿ ಬಿತ್ತಬಹುದು. ಮಳೆ ಬಂದ ನಂತರ ಬೀಜಗಳು ಹುಟ್ಟುವವು. ಒಣ ಬಿತ್ತನೆ ಮಾಡಲು ಪೂರ್ಣವಾಗಿ ಒಣ ಮಣ್ಣು ಇರಬೇಕು. * ಮಣ್ಣಿನಲ್ಲಿ ತೇವಾಂಶ ಇದ್ದರೆ, ರಾತ್ರಿ ಇಡೀ ಬೀಜಗಳನ್ನು ನೀರಿನಲ್ಲಿ ನೆನೆಸಿ, ನೆರಳಲ್ಲಿ ಆರಿಸಬೇಕು. ನಂತರ ಬೀಜೋಪಚಾರ ಮಾಡಿ 18 ಅಂಗುಲ ಅಂತರದ ಸಾಲುಗಳಲ್ಲಿ ...
ತಂತ್ರಜ್ಞಾನದ ಗರಿಷ್ಠ  ಸಂಪನ್ಮೂಲಗಳ ಗರಿಷ್ಠ ಬಳಕೆಯ ಮೂಲಕ ಕೃಷಿ  ಉತ್ಪಾದನೆಯನ್ನು ಹೆಚ್ಚಿಸಲು ಇಂಟರ್ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತ್ತೆ, ಡ್ರೋನ್‌ಗಳು ಮತ್ತು ಡೇಟಾ ಅನಾಲಿಟಿಕ್ಸ್‌ನಂತಹ ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸುವ ಆಧುನಿಕ ವಿಧಾನವಾದ ನಿಖರವಾದ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ  6,000 ಕೋಟಿ ರೂ.ಗಳನ್ನು ಮೀಸಲಿಡಲು ಚಿಂತನೆ ನಡೆಸಿದೆ. ಕೇಂದ್ರ ಕೃಷಿ ಸಚಿವಾಲಯವು ಅಸ್ತಿತ್ವದಲ್ಲಿರುವ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಯೋಜನೆಯಡಿಯಲ್ಲಿ ಸ್ಮಾರ್ಟ್ ನಿಖರವಾದ ತೋಟಗಾರಿಕೆ ಕಾರ್ಯಕ್ರಮ  ಯೋಜನೆ ರೂಪಿಸುತ್ತಿದೆ  ಎಂದು ತಿಳಿದುಬಂದಿದೆ. ಇದು 2024-25 ರಿಂದ 2028-29 ರವರೆಗಿನ ಐದು ವರ್ಷಗಳಲ್ಲಿ...
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ  ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ಜೆ ಪ್ರಕಾರ, ಕೃಷಿ ಸಾಂಸ್ಥಿಕ ಸಾಲವು 2023-24ರ ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹25.10 ಲಕ್ಷ ಕೋಟಿಯನ್ನು ತಲುಪಿದೆ. ಇದು ಕೃಷಿ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಹಣಕಾಸಿನ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಕೃಷಿಯು ಜನಸಂಖ್ಯಾ ಸವಾಲನ್ನು ಎದುರಿಸುತ್ತಿದೆ, ಈಗ ರೈತರ ಸರಾಸರಿ ವಯಸ್ಸು 50.1 ವರ್ಷಗಳು, ಯುವ ಪೀಳಿಗೆಯನ್ನು ಈ ಕ್ಷೇತ್ರಕ್ಕೆ ಆಕರ್ಷಿಸುವ ಅಗತ್ಯವನ್ನು ಆರ್.ಬಿ.ಐ. ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ಜೆ  ಪ್ರತಿಪಾದಿಸಿದರು. “ಸುಮಾರು 7.4 ಕೋಟಿ ಸಕ್ರಿಯ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ಸಕಾಲಿಕ ಮತ್ತು ಹೊಂದಿಕೊಳ್ಳುವ...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಸೋಮವಾರ, 16 ನೇ ಸೆಪ್ಟೆಂಬರ್ 2024 ವಿತರಣೆಯ ಸಮಯ: 12:00 ಗಂಟೆ IST ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ: ಕರ್ನಾಟಕಕ್ಕೆ ಮುನ್ಸೂಚನೆ ದಿನ 1 (16.09.2024): • ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. * ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. * ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನದ ಸಾಧ್ಯತೆಯಿದೆ. ದಿನ 2 (17.09.2024): • ಉತ್ತರ ಕನ್ನಡ, ಉಡುಪಿ, ದಕ್ಷಿಣ...
• DAILY WEATHER REPORT FOR KARNATAKA STATEDATE: MONDAY, the 16th SEPTEMBER 2024. Time of issue: 11:50 Hrs IST SYNOPTIC METEOROLOGICAL FEATURE: • FORECAST & RAINFALL WARNING FOR KARNATAKA FOR NEXT SEVEN DAYS: Day 1 (16.09.2024): • Light to moderate rain very likely to occur at a few places over Uttara Kannada, Udupi, Dakshina Kannada districts. • Light to moderate rain very likely to occur...
ಭಾರತದ ಈರುಳ್ಳಿ ಬೆಳೆಗಾರರಿಗೆ ಅನುಕೂಲ ಮಾಡುವ ದಿಶೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ಮೇಲಿನ ಕನಿಷ್ಟ ರಫ್ತು ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಇದರಿಂದ  ವಿಶೇಷವಾಗಿ ವಿದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡುವುದಕ್ಕೆ ಅನುಕೂಲವಾಗಿದ್ದು ಇದರ ಪ್ರಯೋಜನ ಬೆಳೆಗಾರರಿಗೆ ದಕ್ಕಲಿದೆ. ಈರುಳ್ಳಿಯ ರಫ್ತಿಗೆ ಈ ಹಿಂದೆ ನಿಗದಿಪಡಿಸಿದ್ದ ಕನಿಷ್ಠ ಬೆಲೆಯ ಮಿತಿಯನ್ನು ಶುಕ್ರವಾರ ಅಂದರೆ ಸೆಪ್ಟೆಂಬರ್ 13 ರಂದು ಕೇಂದ್ರ  ಸರ್ಕಾರ ರದ್ದುಗೊಳಿಸಿದೆ. ಸರ್ಕಾರವು ಈ ಹಿಂದೆ ಪ್ರತಿ ಟನ್‌ಗೆ USD 550 ಅನ್ನು ಕನಿಷ್ಠ ರಫ್ತು ಬೆಲೆಯಾಗಿ (MEP) ನಿಗದಿಪಡಿಸಿತ್ತು, ಇದರರ್ಥ ರೈತರು ತಮ್ಮ...
ಈ ವರ್ಷ 2024ರಲ್ಲಿ ಸಕಾಲದಲ್ಲಿಯೇ ನೈರುತ್ಯ ಮುಂಗಾರು ಆರಂಭವಾಗಿದೆ. ರಾಷ್ಟ್ರದಲ್ಲಿ ಸಿಹಿಕಹಿ ಎರಡೂ ಭಾವನೆಗಳನ್ನು ಉಂಟು ಮಾಡಿರುವ ಇದು ಇದೇ ಸೆಪ್ಟೆಂಬರ್ 22 ರಿಂದ ನಿರ್ಗಮನ ಪ್ರಕ್ರಿಯೆ ಆರಂಭಿಸಬಹುದು ರಾಷ್ಟ್ರದಲ್ಲಿ ಒಟ್ಟಾರೆಯಾಗಿ  ಇತ್ತೀಚಿನ ವರ್ಷಗಳಲ್ಲಿ ದೀರ್ಘಾವಧಿಯ ಸರಾಸರಿಗಿಂತ ಶೇಕಡ 8ರಷ್ಟು ಹೆಚ್ಚು ಮಳೆಯಾಗಿದೆ. ಹಲವೆಡೆ ಭೂಮಿ ಸಂಪೂರ್ಣ ತೋಯ್ದಿದೆ. ಕೆರೆಕುಂಟೆ- ಜಲಾಶಯಗಳು ಭರ್ತಿಯಾಗಿದೆ.   ಸೆಪ್ಟೆಂಬರ್ 22 ರ ಸುಮಾರಿಗೆ ವಾಯುವ್ಯ ಭಾರತದ ಭಾಗಗಳಿಂದ ಮುಂಗಾರು ನಿರ್ಗಮನ ಆರಂಭವಾಗಬಹುದು. ಹೀಗೆ ಆದರೆ ಇತ್ತೀಚಿನ ವರ್ಷಗಳಲ್ಲಿಯೇ ತ್ವರಿತ ನಿರ್ಗಮನ ಎಂದಾಗುತ್ತದೆ. ಕಳೆದ ವರ್ಷ ಮುಂಗಾರು ನಿರ್ಗಮನವು  ಸೆಪ್ಟೆಂಬರ್ 25...
ಈಗ ಪೆಟ್ರೋಲ್, ಡಿಸೇಲ್, ಎಲ್.ಪಿ.ಜಿ.,  ಸಿ.ಎನ್.ಜಿ., ಇವಿ  ಆಧರಿತ ಇಂಜಿನ್ ಗಳ ಜಮಾನ. ಆದರೆ ಇವುಗಳ್ಯಾವುದು ಶಾಶ್ವತವಲ್ಲ. ಆದ್ದರಿಂದ ಸಂಶೋಧಕರು ಬದಲಿ ಇಂಜಿನ್ ಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಜೈವಿಕ ಇಂಧನಗಳ ಬಳಕೆಯಲ್ಲಿ ಅಭಿವೃದ್ಧಿಯಾಗಿದ್ದರೂ ಈಗ ಇರುವ ಇಂಜಿನ್ ಗಳಲ್ಲಿ ಸಂಪೂರ್ಣವಾಗಿ ಅಂದರೆ ಶೇಕಡ 100ಕ್ಕೆ 100ರಷ್ಟು ಅವುಗಳನ್ನೇ ಬಳಸಲು ಆಗುತ್ತಿಲ್ಲ. ಪ್ರಸ್ತುತ ಸಂಶೋಧಕರು ಅಭಿವೃದ್ಧಿಪಡಿಸಿರುವ ಡಚ್ ಇಂಜಿನ್ ಎಲ್ಲವುಗಳಿಗೂ ಪರ್ಯಾಯವಾಗಿ ಗೋಚರಿಸುತ್ತಿದೆ. ಇದು ಎಲ್ಲ ದಾಖಲೆಗಳನ್ನು ಮುರಿಯುತ್ತಿದೆ. ಇದರಿಂದ ಭವಿಷ್ಯತ್ತಿನ ಇಂಧನ ಎನಿಸಿಕೊಂಡ ಹೈಡ್ರೋಜನ್ ಅವಶ್ಯಕತೆಯೂ ಇಲ್ಲ ಎಂದು ಹೇಳಲಾಗುತ್ತಿದೆ. ಸಂಶೋಧಕರು ಅಭಿವೃದ್ಧಿಪಡಿಸಿರುವ ಆಲ್ಕೋಹಾಲ್...

Recent Posts