ಹಿಂಗಾರು ಮಳೆ ವಿಳಂಬ; ವಿಶೇಷ ವಿಧಾನಗಳ ಅಗತ್ಯ

0
Countryside Cloud Agriculture Organic Concept

ಈಗಾಗಲೇ ಹಿಂಗಾರಿ ಮಳೆಗಳ ಆರಂಭದಲ್ಲಿ ವಿಳಂಬ ಆಗಿರುವುದರಿಂದ ಕೆಲ ವಿಶೇಷ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.

ಹಿಂಗಾರಿ ಜೋಳ

* ಜೋಳ ಬಿತ್ತುವವರು ಒಣ ಬಿತ್ತನೆ ಮಾಡಬಹುದು.

* 3 ಮಿಲೀ ಕ್ಲೋರ್ ಪೈರಿಫಾಸ್, 3 ಗ್ರಾಂ ಕಾರ್ಬೆಂಡೆಜಿಂ ನಿಂದ ಪ್ರತಿ ಕೆಜಿ ಬೀಜಗಳನ್ನು ಉಪಚರಿಸಿ ಬಿತ್ತಬಹುದು. ಮಳೆ ಬಂದ ನಂತರ ಬೀಜಗಳು ಹುಟ್ಟುವವು. ಒಣ ಬಿತ್ತನೆ ಮಾಡಲು ಪೂರ್ಣವಾಗಿ ಒಣ ಮಣ್ಣು ಇರಬೇಕು.

* ಮಣ್ಣಿನಲ್ಲಿ ತೇವಾಂಶ ಇದ್ದರೆ, ರಾತ್ರಿ ಇಡೀ ಬೀಜಗಳನ್ನು ನೀರಿನಲ್ಲಿ ನೆನೆಸಿ, ನೆರಳಲ್ಲಿ ಆರಿಸಬೇಕು. ನಂತರ ಬೀಜೋಪಚಾರ ಮಾಡಿ 18 ಅಂಗುಲ ಅಂತರದ ಸಾಲುಗಳಲ್ಲಿ  ಬಿತ್ತಬೇಕು. ಇಂತಹ ಸ್ಥಿತಿಯಲ್ಲಿ ಬಳುಗುಂಟೆಯನ್ನು ತಕ್ಷಣ ತಕ್ಷಣ ಹೊಡೆಯಬೇಕು.

* ಬೇಗ ಬಿತ್ತಿದಷ್ಟು ಒಳ್ಳೆಯದು. ಬಹಳ ದಿನಗಳಿಂದ ಮಳೆಯಾಗಿಲ್ಲವಾದ್ದರಿಂದ, ಗರಿಷ್ಟ ಎಂದರೆ 25 ಕೆಜಿ 20:20:0:13 ಗೊಬ್ಬರ ಕೊಡಬಹುದು.

ಕಡಲೆ

* ಪ್ರತಿ ಕೆಜಿ ಬೀಜಗಳನ್ನು 3 ಮಿಲೀ ಕ್ಲೋರ್ ಪೈರಿಫಾಸ್ ಮತ್ತು 3 ಗ್ರಾಂ ಕಾರ್ಬೆಂಡೆಜಿಂ ಗಳಿಂದ ಉಪಚರಿಸಬೆಕು.

* ಪ್ರತಿ ಎಕರೆಗೆ ಬಳಸುವ 25 ಕೆಜಿ ಬೀಜಗಳನ್ನು 150 ಗ್ರಾಂ ರೈಜೋಬಿಯಂ ಅಣುಜೀವಿ ಗೊಬ್ಬರ ಲೇಪಿಸಿ 12 ಅಂಗುಲ ಅಂತರದ ಸಾಲುಗಳಲ್ಲಿ ಬಿತ್ತಬೇಕು.

* ಬಿತ್ತುವಾಗ ಗರಿಷ್ಟ ಪ್ರತಿ ಎಕರೆಗೆ 25 ಕೆಜಿ ಡಿಎಪಿ ಒದಗಿಸಬೇಕು.

* ಕಡಲೆಯನ್ನು ಕುಸುಬೆಯೊಂದಿಗೆ 4:2 ಸಾಲುಗಳಲ್ಲಿ; ಜೋಳ ದೊಂದಿಗೆ 6:2 ಸಾಲುಗಳಲ್ಲಿ ಅಕ್ಕಡಿಯಾಗಿ ಬೆಳೆಯಬಹುದು. ಅಕ್ಕಡಿ ಬೆಳೆಗಳ ಬೀಜಗಳನ್ನು ಸಹ ಉಪಚರಿಸುವುದು ಅಗತ್ಯ.

ಕುಸುಬೆ

* ಪ್ರತಿ ಕೆಜಿ ಬೀಜಗಳನ್ನು 3 ಮಿಲೀ ಕ್ಲೋರ್ ಪೈರಿಫಾಸ್ ಮತ್ತು 3 ಗ್ರಾಂ ಕಾರ್ಬೆಂಡೆಜಿಂ ಗಳಿಂದ ಉಪಚರಿಸಬೆಕು.

* ಪ್ರತಿ ಎಕರೆಗೆ ಬಳಸುವ 25 ಕೆಜಿ ಬೀಜಗಳನ್ನು 150 ಗ್ರಾಂ ಅಜೋಸ್ಪಿರಿಲಂ ಅಣುಜೀವಿ ಗೊಬ್ಬರ ಲೇಪಿಸಿ  2 ಅಡಿ ಅಂತರದ ಸಾಲುಗಳಲ್ಲಿ ಬಿತ್ತಬೇಕು.

* ಬಿತ್ತುವಾಗ ಗರಿಷ್ಟ ಪ್ರತಿ ಎಕರೆಗೆ 25 ಕೆಜಿ 12:32:16 ಗೊಬ್ಬರ ಒದಗಿಸಬೇಕು.

* ಕುಸುಬೆಯನ್ನು ಯನ್ನು ಕಡಲೆ ಯೊಂದಿಗೆ 2:4 ಸಾಲುಗಳಲ್ಲಿ; ಜೋಳ ದೊಂದಿಗೆ 2:6 ಸಾಲುಗಳಲ್ಲಿ ಅಕ್ಕಡಿಯಾಗಿ ಬೆಳೆಯಬಹುದು. ಅಕ್ಕಡಿ ಬೆಳೆಗಳ ಬೀಜಗಳನ್ನು ಸಹ  ಅಗತ್ಯವಾಗಿ ಉಪಚರಿಸಬೇಕು.

 ಸಾಮಾನ್ಯ ಸಲಹೆಗಳು

* ಗೋಧಿ ಬಿತ್ತುವವರು ಮಟ್ಟವಾದ ತಗ್ಗು ಜಮೀನಿನಲ್ಲಿ ಮಳೆಯಾಶ್ರಯದಲ್ಲಿ ಜೋಳ, ಕುಸುಬೆ ಬೆಳೆಗಳಿಗೆ  ತಿಳಿಸಿದಂತೆ ಬೀಜೋಪಚಾರ ಮಾಡಿ ಬಿತ್ತಬೇಕು.

* ಕಡಲೆ, ಜೋಳಗಳಲ್ಲಿ ಕೊತ್ತಂಬರಿ ಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ಸೂಕ್ತ.

* ನೀರಾವರಿಯಲ್ಲಿ ಗೋಧಿಯನ್ನು  ನವಂಬರ್ ಎರಡನೇ ವಾರದ  ( ಅಂದರೆ ಚಳಿ ಶುರುವಾದ ) ನಂತರವೇ ಬಿತ್ತನೆ ಮಾಡಬೇಕು.

* ಗೋಧಿಗೆ ಸಹ ಬೀಜೋಪಚಾರ ಕಡ್ಡಾಯ. ಸಾಸುವೆ, ಗುರೆಳ್ಳು, ಎಳ್ಳು ಗಳನ್ನು ಮಿಶ್ರ ಬೆಳೆಗಳಾಗಿ ಬೆಳೆಯಬಹುದು.

ಇಂದ:

ವರದಾ ಕೃಷಿಕರ ವೇದಿಕೆ

LEAVE A REPLY

Please enter your comment!
Please enter your name here