Home Blog Page 4
ಬೆಂಗಳೂರು: ಬೆಳಗಾವಿಯ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸಕ್ಕರೆ ತಂತ್ರಜ್ಞಾನದಲ್ಲಿ ಎಂ.ಎಸ್ಸಿ., ಕೋರ್ಸ್‌ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್‌. ಪಾಟೀಲ ತಿಳಿಸಿದರು. ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ  ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬೆಳಗಾವಿ ಸಮೀಪದ ಬೆನಕನಹಳ್ಳಿಯಲ್ಲಿ ಸಕ್ಕರೆ, ಮದ್ಯಸಾರ ಸಂಶೋಧನಾ ಕೇಂದ್ರ ಆರಂಭಿಸಲು ಹಾಗೂ ಆಸಕ್ತರಿಗೆ ಸಕ್ಕರೆ ಮತ್ತು ತಂತ್ರಜ್ಞಾನದಲ್ಲಿ ಪಿ.ಎಚ್‌ಡಿಗೆ ಅವಕಾಶ ಕಲ್ಪಿಸಲು ಆಡಳಿತ ಮಂಡಳಿ ನಿರ್ಣಯ ಮಾಡಿದೆ. ಕಾಲೇಜು ಆರಂಭಿಸಲು ಸುಮಾರು ರೂ 15 ಕೋಟಿ ಅಗತ್ಯವಿದೆ. ತಕ್ಷಣಕ್ಕೆ  5...
ಕೃಷಿಕರ ಜೀವನೋಪಾಯ ಭದ್ರತೆಯನ್ನು ಖಾತ್ರಿ ಮಾಡಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.  ಹಸಿರುಕ್ರಾಂತಿ ಪ್ರಯತ್ನಗಳ ಮೂಲಕ ಭಾರತ ಆಹಾರ ಭದ್ರತೆ ಸಾಧಿಸಿದರೂ, 2047ರೊಳಗೆ ವಿಶ್ವದ ಆಹಾರ ಬುಟ್ಟಿಯಾಗುವ ನಿಟ್ಟಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗುವ ಸಾಧ್ಯತೆ ಇದೆ. ಇದನ್ನು ಸಾಧಿಸಲು, ಉತ್ಕೃಷ್ಟ ತಳಿಗಳು, ಹೆಚ್ಚಿನ ಸಾಂದ್ರತಾ ಬೆಳೆ ಪದ್ಧತಿಗಳು ಮತ್ತು ಸ್ಥಿರತೆಯಿಂದ ಯುಕ್ತವಾದ ನವೀನ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಎಂಎಸ್ಎಮ್‌ಇ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು. ಅವರು...
ಭಾಗ - 2 ತುಮಕೂರಿನ ತೆಂಗಿಗೆ ಸಂಕಷ್ಟ ನಿಮ್ಮೆಲ್ಲರ ತೋಟದ ತೆಂಗಿನ ಇಳುವರಿ ಕಡಿಮೆಯಾಗಲು ಮುಖ್ಯ ಕಾರಣ ಏನು ಎಂದು ಇಂದು ಸಿಪಿಸಿಆರ್ ಐ ಹಿರಿಯ ವಿಜ್ಞಾನಿಗಳಿಗೆ ಕೇಳಿದೆ. ಅವರು ಹೇಳಿದ್ದು, ನಾನು ಈ ಹಿಂದಿನ ಪೋಸ್ಟ್ ನಲ್ಲಿ ಬರೆದಿದ್ದ ಹಾಗೆ ಹವಾಮಾನ ವೈಪರೀತ್ಯಗಳು ಕಾರಣ. ವೈಟ್ ಫ್ಲೈನಂತಹ ಕೀಟ ಬಾಧೆ ಹೆಚ್ಚಾಗಲು  ಈ ಹವಾಮಾನ ವೈಪರೀತ್ಯವೆ ಕಾರಣವಾಗಿದೆ ಎಂದರು. ತುಮಕೂರು ಮತ್ತು ಪೊಲ್ಲಾಚಿ ಭಾಗದಲ್ಲಿ ಹವಾಮಾನ ವೈಪರೀತ್ಯದ ಸಮಸ್ಯೆ ತೆಂಗಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದರು. ತುಮಕೂರು ಭಾಗದಲ್ಲಿ ಅಂತರ್ಜಲ ಆಳ ಆಳಕ್ಕೆ...
ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ) ಘೋಷವಾಕ್ಯದೊಂದಿಗೆ 2025ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿತವಾಗಿದೆ. ಫೆಬ್ರವರಿ 27ರಿಂದ ಮಾರ್ಚ್ 1ರ ತನಕ ಬೆಂಗಳೂರು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಡೆಯಲಿದೆ. 2025ನೇ ರಾಷ್ಟ್ರೀಯ ತೋಟಗಾರಿಕಾ ಮೇಳದ ಈ ಬಾರಿಯ ಮುಖ್ಯ ವಿಷಯ "ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ)" ಆಗಿದೆ.  ಪೌಷ್ಠಿಕಾಂಶಯುಕ್ತ ಬೆಳೆಗಳ ಮೂಲಕ ಪೌಷ್ಠಿಕತೆ ಹೆಚ್ಚಿಸುವ ತಂತ್ರಜ್ಞಾನ ಮತ್ತು ಕ್ರಮಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಗುವುದು ಎಂದು ರಾಷ್ಟ್ರೀಯ ತೋಟಗಾರಿಕೆ ಮೇಳ 2025 ರ...
ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆಯು ಜಾಗತಿಕವಾಗಿ ವ್ಯಾಪಕವಾದ ಕಳವಳಕಾರಿ ಅಂಶವಾಗಿದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಈ ಅಗತ್ಯ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುತ್ತಿಲ್ಲ. ಕ್ಯಾಲ್ಸಿಯಂ ಮಾನವನ ಆರೋಗ್ಯದಲ್ಲಿ ವಿಶೇಷ ಪಾತ್ರ ವಹಿಸುತ್ತದೆ.  ಮುಖ್ಯವಾಗಿ ಬಲವಾದ ಮೂಳೆಗಳನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶವಿರುವ ಪೌಷ್ಟಿಕಾಂಶ ಭರಿತ ಆಹಾರ ಸೇವನೆಯು ಗರ್ಭಧಾರಣೆಯ ತೊಡಕುಗಳು, ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ  ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿರ್ಬಂಧಿಸುವ ಗುಣ ಹೊಂದಿದೆ. ಇದರ ಮಹತ್ವವನ್ನು ಗುರುತಿಸಿ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR-IIHR) ಎಲ್ಮ್...
 ಯಾರ ತೋಟದಲ್ಲಿ ತೆಂಗಿನ ಫಸಲು ಕಡಿಮೆಯಾಗಿಲ್ಲ ಹೇಳಿ? ಎಲ್ಲೆಲ್ಲೂ ಫಸಲು ಕಡಿಮೆಯಾಗಿರುವುದೇ ಸುದ್ದಿ. ಯಾಕೆ ಕಡಿಮೆಯಾಗಿದೆ? ಉತ್ತರವಿಲ್ಲ. ಅನೇಕ ಹಿರಿಯ ರೈತರುಗಳು “ನಮ್ದು ಮುವತ್ತು ಸಾವಿರ ಕಾಯಿ ಆಗ್ತಾ ಇತ್ತು. ಈಗ ಬರೀ ಎಂಟು ಸಾವಿರ ಆಗ್ತಾ ಇದೆ” ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ವರ್ಷ ಫಸಲು ಹೆಚ್ಚಾಗಿ ಇನ್ನೊಂದು ವರ್ಷ ಕಡಿಮೆಯಾಗುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ತುಮಕೂರು ಜಿಲ್ಲೆಯ ಭಾಗದಲ್ಲಿ ತೆಂಗು ಬೆಳೆ ಕಡಿಮೆಯಾಗಿದೆ. ವಾಡಿಕೆಗಿಂತ ಅತೀ ಕಡಿಮೆ ಫಸಲು ಸಿಗುತ್ತಿದೆ. ಇದಕ್ಕೆ ಕಾರಣವು ಸ್ಪಷ್ಟವಾಗಿದೆ, ಕ್ಲೈಮಟ್ ಚೇಂಜ್. ಹವಾಮಾನದಲ್ಲಿ ಆಗುತ್ತಿರುವ...
ರಾಷ್ಟ್ರೀಯ ತೋಟಗಾರಿಕಾ ಮೇಳವು ಅಧಿಕ ಪೌಷ್ಠಿಕಾಂಶ ಹೊಂದಿರುವ  ಬೆಳೆಗಳು ಮತ್ತು ಪೌಷ್ಠಿಕಾಂಶವನ್ನು ಹೆಚ್ಚಿಸಲು ಅಗತ್ಯವಾದ ಸುಧಾರಿತ ತಂತ್ರಜ್ಞಾನಗಳ  ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸಿದೆ. “ವಿಕಸಿತ ಭಾರತಕ್ಕಾಗಿ ತೋಟಗಾರಿಕೆ” ಎನ್ನುವುದು ಮೇಳದ ಘೋಷವಾಕ್ಯವಾಗಿದೆ ಎಂದು ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ತುಷಾರ್ ಕಾಂತಿ ಬೆಹೆರಾ ಹೇಳಿದರು. ನವೀನ ಪರಿಹಾರಗಳು ಮತ್ತು ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಮೇಳ ಹೊಂದಿದೆ. ತೋಟಗಾರರ ಜೀವನೋಪಾಯ ಸುಧಾರಣೆಗೆ ಸಹಕಾರಿಯಾಗಲಿದೆ. ಉತ್ಪಾದಕತೆ, ಆದಾಯ ಮತ್ತು ಜೀವನೋಪಾಯವನ್ನು ಹೆಚ್ಚಿಸುವ ತೋಟಗಾರಿಕಾ ತಂತ್ರಜ್ಞಾನಗಳನ್ನು ಉತ್ತೇಜಿಸುವ ಉದ್ದೇಶವನ್ನು ಈ ಮೇಳವು...
ಕರ್ನಾಟಕದಲ್ಲಿ ವೈವಿಧ್ಯಮಯ ವಲಯಗಳಿವೆ. ಪ್ರತಿಯೊಂದು ವಲಯವೂ ವಿವಿಧ ಬಣ್ಣಗಳ ಮಣ್ಣುಗಳಿಂದ ಕೂಡಿದೆ.  ವಿಭಿನ್ನ ಹವಾಮಾನ ಹೊಂದಿದೆ. ಇದರಿಂದಾಗಿ  "ಹವಾಮಾನ ಆಧಾರಿತ ಬಹುಬೆಳೆ ಬೇಸಾಯ ಪದ್ಧತಿ" ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಕರ್ನಾಟಕದ ಸಾಗುವಳಿ ಮಣ್ಣಿನ ಶೇಕಡಾ 70 ಭಾಗ ಮಳೆಯನ್ನೇ ನಂಬಿ ಬೇಸಾಯ ಮಾಡುವ ಹೊಲಗಳೇ ಆಗಿವೆ. ಈ ಹೊಲಗಳಲ್ಲಿ ಬಹುಬೆಳೆ ಬೆಳೆಯುವ ಬಹುತೇಕ ಸಣ್ಣ ಹಿಡುವಳಿದಾರರು ಮಳೆಬೇಸಾಯವನ್ನೇ ಪ್ರಧಾನ ಕಸುಬಾಗಿಸಿಕೊಂಡಿರುವ ರೈತ ಸಮುದಾಯಗಳು. ನಮ್ಮ ಮಳೆಬೇಸಾಯದಲ್ಲಿ ರೈತಸಮುದಾಯಗಳು ಬಹುಬೆಳೆಗಳನ್ನು ಬೆಳೆಯುವ ವಿಧಾನಗಳು ಬೆರಗುಗೊಳಿಸುತ್ತವೆ. ನಾಡಿಗೆ ಅಗತ್ಯವಾದ ಬಹುಬಗೆಯ ಆಹಾರ ಬೆಳೆಗಳು ಉತ್ಪತ್ತಿಯಾಗುತ್ತಿರುವುದು ಮಳೆಯನ್ನೇ ನಂಬಿರುವ ಹೊಲಗಳಲ್ಲೇ...
ಚಳಿಗಾಲ ಇನ್ನೂ ಮುಗಿದಿಲ್ಲ. ಆಗಲೇ ತಾಪಮಾನ ಏರಿಕೆಯಾಗಿದೆ. ಬೆಳಗ್ಗೆ ಎಂಟು ಗಂಟೆಗೆಲ್ಲ ಬಿಸಿಲಿನ ತೀಷ್ಣತೆ ಹೆಚ್ಚಿರುತ್ತದೆ. ಮಧ್ಯಾಹ್ನ 12 ಗಂಟೆ ಕಳೆಯುತ್ತಿದ್ದಂತೆ ಹೊರಗೆ ನಡೆದಾಡಲೂ ಸಾಧ್ಯವಾಗದಷ್ಟು ಬಿಸಿಲು ಹೆಚ್ಚಿರುತ್ತದೆ. ಈ ರೀತಿಯ ಹವಾಮಾನ ಏರಿಕೆ ಕುರಿತು ತಜ್ಞರು ನೀಡಿರುವ ಮಾಹಿತಿ ನಿಮ್ಮ ಮುಂದಿದೆ. ಈ ನಡುವೆ ಕೆಲವು ದಿನಗಳಲ್ಲಿ ತೀವ್ರ ಚಳಿ ಮತ್ತೆ ಕೆಲವು ದಿನಗಳಲ್ಲಿ ಧಗೆ ಆಗುತ್ತಿದೆ. ಇದಕ್ಕೆ ಕಾರಣ ಗಾಳಿ ಬೀಸುವ ದಿಕ್ಕು ಬದಲಾಗುತ್ತಿರುವುದು. ಚಳಿಗಾಲದಲ್ಲಿ ಗಾಳಿಯ ದಿಕ್ಕು ಉತ್ತರದಿಂದ ಬೀಸಿದರೆ ಚಳಿ ತೀವ್ರತೆ ಹೆಚ್ಚುತ್ತದೆ.  ಪೂರ್ವ ದಿಕ್ಕಿನಿಂದ ಗಾಳಿ ಬೀಸಿದಾಗ...
DATE: FRIDAY, THE 21st FEBRUARY 202̧5 Time of issue: 12:25 Hrs IST̤ DAILY WEATHER REPORT FOR KARNATAKA STATE. SYNOPTIC FEATURES FOR KARNATAKA STATE: Light to Moderate Southerlies/South easterlies prevail over the state in the lower • Dry weather very likely to prevail over the State. *TEMPERATURE CONDITIONS • Minimum temperatures are in range of 24-25°C over Coastal Karnataka, 18-20°C over Bidar, Dharwad...

Recent Posts