ನಮ್ಮ ಆಹಾರ ಮೂಲಗಳನ್ನು ನಾವೇ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ

0
ಲೇಖಕರು: ಸೀಮಾ ಸಜ್ಜನ್

ಅಡುಗೆಮನೆಯಲ್ಲಿ ಸಾಮಾನ್ಯವಾಗಿ  ಎಂದಿಗೂ  ಆಹ್ವಾನಿಸದ ಅತಿಥಿಗಳನ್ನು ಕಾಣುತ್ತೇವೆ. ನಾವು ಏನೇ ಸಿದ್ಧಪಡಿಸಿದರೂ ಅವುಗಳು  ಕೇಳುವುದು ವಾಡಿಕೆ. ಅವುಗಳನ್ನು ತಡೆಯಲು ಅಸಹಾಯಕರಾದ ನಾವು ಅವುಗಳ ಅಡಗುದಾಣಗಳನ್ನು ಹುಡುಕಲು ಹುಡುಕಿದೆವು, ಆದರೆ  ಆ ಪ್ರಯತ್ನ ವ್ಯರ್ಥವಾಯಿತು. ಅವುಗಳ ರಹಸ್ಯ ಸ್ಥಳವು ನಮಗೆ ಇನ್ನೂ ನಿಗೂಢವಾಗಿದೆ. ಆದರೆ ಅವುಗಳ  ಮೆಚ್ಚಿನ ತಿನಿಸುಗಳ ಸಮಯದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಸೇರುತ್ತವೆ.

ಹಾಲು, ಮೊಸರು ಮತ್ತು ಬೆಣ್ಣೆಯ ಹಾಲಿನ ಮೇಲೆ ತೇಲುವ ಅವುಗಳ ಶರೀರವು  ಸಹ ನಾವು ಅವುಗಳನ್ನು ಕೊಂದಿದ್ದೇವೆ ಎಂಬ ತಪ್ಪಿತಸ್ಥ ಭಾವನೆಯನ್ನು ಉಂಟುಮಾಡಿದ ಕಾರಣ, ನಾವು ಅರಿವಿಲ್ಲದೆಯೇ ನಮ್ಮ ಆಹಾರ ಪದಾರ್ಥಗಳನ್ನು ಅವುಗಳ  ಕೈಗೆಟುಕದಂತೆ ಇರಿಸಿಕೊಳ್ಳಲು ಬಹಳ ಜಾಗರೂಕರಾಗಿರುತ್ತೇವೆ. ಇದುವರೆಗೆ ಯಾವುದರ ಬಗ್ಗೆ ಹೇಳುತ್ತಿದ್ದೇನೆ ಎಂದು ಆಶ್ಚರ್ಯವಾಗಿರಬಹುದಲ್ಲವೇ ? ಹೌದು! ಶಿಸ್ತಿನ ಕಂದು ಇರುವೆ (ಕನ್ನಡದಲ್ಲಿ ಜಿಡ್ಡು ಇರುವೆ) ಬಗ್ಗೆ ಮಾತನಾಡುತ್ತಿದ್ದೇನೆ.

 ಒಂದು ಮಧ್ಯಾಹ್ನ, ನಾನು ಮುಂಬಾಗಿಲನ್ನು ತೆರೆದಾಗ, ಒಂದು ವಿಲಕ್ಷಣ ವಿಷಯವು ನನ್ನ ಗಮನ ಸೆಳೆಯಿತು. ಅದು ನನ್ನ ಮಗನ ಕಡು ನೀಲಿ ಬಣ್ಣದ ಶೂ-ಸಾಕ್ಸ್ ಆಗಿದ್ದು, ಅದು ಕಂದು ಬಣ್ಣಕ್ಕೆ ತಿರುಗಿತ್ತು. ನನಗೆ ಆಶ್ಚರ್ಯ. ಗಮನಿಸಿದಾಗ ಅವುಗಳ ಮೇಲೆ  ಏನೋ ಚಲಿಸುತ್ತಿದೆ ಎಂದು ತಿಳಿಯಿತು. ಕಂದುಬಣ್ಣದ ವಸ್ತು ಅದೇ ಇರುವೆಗಳ ಪಡೆ ಎಂದು ತಿಳಿದ ನಂತರ, ಕರುಣೆ ಉಂಟಾಯಿತು.  ಈ ಇರುವೆಗಳು ಸಾಕ್ಸ್ ಮೇಲಿದ್ದ ತುಂಬ ಸಣ್ಣಸಣ್ಣ ಆಹಾರ ತುಣಕುಗಳನ್ನು ತಿನ್ನುವುದಕ್ಕಾಗಿ ಸೇರಿದ್ದವು.

ಈ  ಘಟನೆಯು ಆಹಾರದ ಕೊರತೆಯ ಕಾರಣ ಅವುಗಳು ಸಾಕ್ಸ್ ಅನ್ನು  ನೆಕ್ಕುವಂತೆ ಮಾಡಿದೆ ಮತ್ತು ಅವುಗಳ ಪಾಲನ್ನು ಸೀಮಿತಗೊಳಿಸುವ ನನ್ನ  ಅಭ್ಯಾಸವು ಈ ದೃಶ್ಯಕ್ಕೆ ಮೂಲವಾಗಿದೆ ಎಂದು ನನಗೆ ಅರ್ಥವಾಯಿತು. ತಕ್ಷಣವೇ ಒಂದು ಬಿಸ್ಕತ್ತನ್ನು ಪುಡಿಮಾಡಿ ಅವುಗಳ ಸಾಲು ಆರಂಭವಾದ ಎಡೆಗೆ ತೆಗೆದುಕೊಂಡು ಹೋಗಿ ಹಾಕಿದೆ. ನಂತರವೇ ಅವುಗಳ ಸಾಕ್ಸ್ ಮೇಲಿದ್ದ ಚೆದುರಿದವು.

ನಂತರ ನಾವು ಈ ಸಣ್ಣಸಣ್ಣ ಇರುವೆಗಳಿಗಾಗಿ ಒಂದಲ್ಲ ಒಂದು  ತಿನಿಸನ್ನು ಇಟ್ಟುಕೊಳ್ಳುವುದನ್ನು  ಅಭ್ಯಾಸ ಮಾಡಿಕೊಂಡೆವು . ಪ್ರಕೃತಿಯಲ್ಲಿನ ಆಹಾರದ ಕೊರತೆಯು ಸಮೀಪಿಸುತ್ತಿರುವ ಬೇಸಿಗೆಯ ತೀವ್ರ  ಶಾಖದ ಅಲೆಗಳಿಗೆ ಲಭ್ಯವಿರುವ ಎಲ್ಲವನ್ನೂ ಎದುರಿಸುವಂತೆ ಮಾಡಿದೆ ಎಂದು ನಾನು ಊಹಿಸಿದೆ.  ಅದು ನಮ್ಮ ಆಹಾರ ಧಾನ್ಯಗಳು ಕೊರತೆಯಾಗುವಂತೆ ಮಾಡಿ ನಮ್ಮ ತಟ್ಟೆಯಿಂದ ಆಹಾರವು ಕಡಿಮೆಕಡಿಮೆ ಮಾಡುತ್ತಾ ಹೋಗಬಹುದು ಎನಿಸಿತು. ಇದನ್ನೆಲ್ಲ ಮುಂದಿನ ದಿನಗಳಲ್ಲಿ ವಿಪತ್ತು ನಮ್ಮ ಮೇಲೂ  ಬೀಳಬಹುದು

ಬಂಡೀಪುರದ ಮೂರು ವರ್ಷದ ಪುಟ್ಟ ಹುಲಿಯ ಶವದಲ್ಲಿ ಮುಳ್ಳುಹಂದಿಯ ಮುಳ್ಳುಗಳಿವೆ ಎಂಬ ಇತ್ತೀಚಿನ ಸುದ್ದಿಯು ಇತರ ಪ್ರಾಣಿಗಳಿಗೂ ಉಂಟಾಗಿರುವ ಆಹಾರದ ಕೊರತೆಯ ಬಗ್ಗೆ ತೀವ್ರವಾಗಿ ಯೋಚಿಸುವಂತೆ ಮಾಡಿತು. ಮುಳ್ಳುಹಂದಿಯ ಮುಳ್ಳುಗಳು ತುಂಬ ತೀಕ್ಷ್ಣವಾಗಿರುತ್ತವೆ ಮತ್ತು ಸಣ್ಣ ಹುಲಿ ಅಗಿಯುವುದನ್ನು ಊಹಿಸಲು ಅಸಾಧ್ಯವಾಗಿತ್ತು.  ಅದರ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದವಡೆಗಳು ಮತ್ತು ಗಂಟಲುಗಳು ಹೇಗೆ ಕಠಿಣವಾದ ಚುಚ್ಚುವಿಕೆಯನ್ನು ತಡೆದುಕೊಂಡವು, ಅದು ತನ್ನ ಹಸಿವು ನೀಗಿಸಿಕೊಳ್ಳುವ ಯತ್ನದಲ್ಲಿ ಎಷ್ಟೆಲ್ಲ ಯಾತನೆ ಅನುಭವಿಸಿರಬಹುದೆಂದು ಅನಿಸಿತು.

ಮತ್ತೊಂದು ಘಟನೆಯಲ್ಲಿ, ಒಂದೂವರೆ ವರ್ಷದ ಚಿರತೆ ಶಿವಮೊಗ್ಗದ ಆಯನೂರು ಬಳಿ ರಾತ್ರಿಯ ವೇಳೆ ಕಾರಿಗೆ ಸಿಲುಕಿ ಮೃತಪಟ್ಟಿತು.  ಬೆಳಿಗ್ಗೆ ವೇಳೆ ಈ  ಪರಭಕ್ಷಕಗಳು ತಮ್ಮ ವಾಸಸ್ಥಳದಿಂದ ಹೊರಬರಲು ಸಾಧ್ಯವಾಗುವುದಿಲ್ಲ.  ರಾತ್ರಿಯ ವೇಳೆ ಆಹಾರದ ಹುಡುಕಾಟದಲ್ಲಿ ಅವುಗಳು  ಹೊರಬಂದಾಗ ಇಂಥ ದುರಂತವನ್ನು ಕಾಣಬೇಕಾಗುತ್ತದೆ.

ಈ ಪರಿಸರ ವ್ಯವಸ್ಥೆಯ ಸುಗಮ ಓಟಕ್ಕೆ ಅತ್ಯಗತ್ಯವಾಗಿರುವ ಸಾಕಷ್ಟು ಕೀಟಗಳು ಮತ್ತು ಜೇನುನೊಣಗಳು ತಮ್ಮ ಉಳಿವಿಗಾಗಿ ಸರಿಯಾದ ಆಹಾರವಿಲ್ಲದೆ ತಮ್ಮ ಅಂತ್ಯವನ್ನು ಕಂಡುಕೊಳ್ಳುತ್ತಿವೆ ಮತ್ತು ಮೇಲಾಗಿ ಅನೇಕ ಜಾನುವಾರುಗಳು ಮತ್ತು ಪಕ್ಷಿಗಳಿಗೆ ಆಹಾರ ಮತ್ತು ಕೆಲವು ಬಗೆಯ ಪ್ಲಾಸ್ಟಿಕ್  ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಪಕ್ಷಿಗಳು ತಮ್ಮ ಪುಟ್ಟ ಮರಿಗಳಿಗೆ ಪ್ಲಾಸ್ಟಿಕ್ ಅನ್ನು ತಿನ್ನಿಸುತ್ತಿವೆ. ಇದಕ್ಕೆಲ್ಲ ಕಾರಣ   ಭೂಮಿಯ ಮೇಲಿನ ಇತರ ಪ್ರಾಣಿ ಪ್ರಬೇಧಗಳ  ಬಗ್ಗೆ ಇರುವ ನಮ್ಮ ನಿರಾಸಕ್ತಿ ವರ್ತನೆಯೇ ಕಾರವಾಗಿದೆ. ಇದರಿಂದ ಅವುಗಳು ಬಲಿಯಾಗುತ್ತಿವೆ.

ಈ ಎಲ್ಲ ಕಾರಣಗಳಿಂದಾಗಿ  ನಾವು ಇತರ ಪ್ರಾಣಿ ಸಮೂಹಕ್ಕೆ ಮಾತ್ರವಲ್ಲದೆ ನಮಗೂ ಆಹಾರದ ಲಭ್ಯತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ !

LEAVE A REPLY

Please enter your comment!
Please enter your name here